ಪಶ್ಚಿಮ ಬಂಗಾಳ ಪಂಚಾಯತ್‌ ಚುನಾವಣೆ ವೇಳೆ ಹಿಂಸಾಚಾರ: ಒಟ್ಟು 11 ಮಂದಿ ಮೃತ್ಯು

ಹತ್ಯೆಯಾದವರಲ್ಲಿ ಆರು ತೃಣಮೂಲ ಕಾಂಗ್ರೆಸ್ ಸದಸ್ಯರು‌, ಬಿಜೆಪಿ, ಎಡ, ಕಾಂಗ್ರೆಸ್ ಮತ್ತು ಐಎಸ್‌ಎಫ್‌ನ ತಲಾ ಒಬ್ಬ ಕಾರ್ಯಕರ್ತ ಮತ್ತು ಇನ್ನೋರ್ವ ವ್ಯಕ್ತಿಯ ರಾಜಕೀಯ ಗುರುತು ತಿಳಿದಿಲ್ಲ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

Update: 2023-07-08 13:38 GMT
Editor : Muad | Byline : ವಾರ್ತಾಭಾರತಿ

Photo : PTI

ಕೋಲ್ಕತ್ತಾ: 2024 ರ ಸಂಸತ್ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಮುಖವಾಗಿರುವ ಮತ್ತು ಪಶ್ಚಿಮ ಬಂಗಾಳ ರಾಜ್ಯದ ರಾಜಕೀಯ ದೃಶ್ಯಾವಳಿಗಳನ್ನೇ ಮರುರೂಪಿಸಬಹುದಾದ ನಿರ್ಣಾಯಕ ಮೂರು ಹಂತದ ಪಂಚಾಯತ್ ಚುನಾವಣೆ ಇಂದು ನಡೆದಿದ್ದು, ಈ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ಹತ್ಯೆಯಾದವರಲ್ಲಿ ಆರು ತೃಣಮೂಲ ಕಾಂಗ್ರೆಸ್ ಸದಸ್ಯರು‌, ಬಿಜೆಪಿ, ಎಡ, ಕಾಂಗ್ರೆಸ್ ಮತ್ತು ಐಎಸ್‌ಎಫ್‌ನ ತಲಾ ಒಬ್ಬ ಕಾರ್ಯಕರ್ತ ಮತ್ತು ಇನ್ನೋರ್ವ ವ್ಯಕ್ತಿಯ ರಾಜಕೀಯ ಗುರುತು ತಿಳಿದಿಲ್ಲ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌, ಭದ್ರತೆಗೆ ನಿಯೋಜಿಸಲಾದ ಕೇಂದ್ರ ಪಡೆಗಳ ಕಡೆಯಿಂದ ನಡೆದ ಭೀಕರ ವೈಫಲ್ಯ ಇದಾಗಿದೆ ಎಂದು ಆರೋಪಿಸಿದೆ. ಹಿಂಸಾತ್ಮಕ ಘಟನೆಗಳ ಕಾರಣದಿಂದ ಹಲವಾರು ಕಡೆ ಜನರಿಗೆ ಗಾಯಗಳಾಗಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಮತಪೆಟ್ಟಿಗೆಗಳನ್ನು ನಾಶಪಡಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

22 ಜಿಲ್ಲಾ ಪರಿಷತ್‌ಗಳು, 9,730 ಪಂಚಾಯಿತಿ ಸಮಿತಿಗಳು ಮತ್ತು 63,229 ಗ್ರಾಮ ಪಂಚಾಯಿತಿಗಳ ಸ್ಥಾನಗಳಿಗೆ ಸುಮಾರು 928 ಸ್ಥಾನಗಳಿಗೆ 5.67 ಕೋಟಿ ಜನರು 2.06 ಲಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರೊಂದಿಗೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಮಧ್ಯಾಹ್ನ 1 ಗಂಟೆಯವರೆಗೆ ಶೇ.36.66ರಷ್ಟು ಮತದಾನವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News