ಸಾವಿನಲ್ಲೂ ಒಂದಾದ ದಂಪತಿ

Update: 2023-09-29 06:51 GMT

ಮೃತ ದಂಪತಿ

ದಾವಣಗೆರೆ: ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ದಂಪತಿಯೊಂದು ಸಾವಿನಲ್ಲೂ ಒಂದಾದ ಘಟನೆ ವರದಿಯಾಗಿದೆ. 

ಕಾರಿಗನೂರು ಗ್ರಾಮದ ಭೀಮಾನಾಯ್ಕ, (65) ಪಾರ್ವತಿ ಬಾಯಿ ಮೃತ ದಂಪತಿ ಎಂದು ಗುರುತಿಸಲಾಗಿದೆ.

ಭೀಮಾನಾಯ್ಕ ಪಾರ್ಶ್ವ ವಾಯು ರೋಗದಿಂದ ಬಳಲುತ್ತಿದ್ದರು. ಸೋಮವಾರ ಸಂಜೆ 4ಕ್ಕೆ ಮೃತಪಟ್ಟಿದ್ದರು. ಆ ಆಘಾತದಿಂದ ಅವರ ಪತ್ನಿ ಪಾರ್ವತಿ ಬಾಯಿಯೂ ಅದೇ ದಿನ ರಾತ್ರಿ 7ಕ್ಕೆ ನಿಧನರಾಗಿದ್ದಾರೆ. 

ಸಾವಿನ ಸುದ್ದಿ ಕೇಳಿ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News