ಮಾಜಿ ಸಚಿವ ರೇಣುಕಾಚಾರ್ಯ ಪುತ್ರಿ ಸಹಿತ ನಾಲ್ವರ ಜಾತಿ ಪ್ರಮಾಣ ಪತ್ರ ರದ್ದು

Update: 2023-10-01 14:00 GMT

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು, ಅ. 1: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಪುತ್ರಿ ಎಂ.ಆರ್.ಚೇತನಾ ಸೇರಿದಂತೆ ನಾಲ್ವರ ಜಾತಿ ಪ್ರಮಾಣ ಪತ್ರಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಇತರೆ ಹಿಂದುಳಿದ ಜಾತಿ(ಮೀಸಲಾತಿ ಅಥವಾ ನೇಮಕಾತಿ ಇತರೆ) ಕಾಯ್ದೆ 1990ರ ಸೆಕ್ಷನ್ ಎಫ್ ರಡಿ ಸಲ್ಲಿಸಿರುವ ಪರಿಶೀಲನಾ ಅರ್ಜಿ ಕುರಿತಂತೆ ಎಂ.ಆರ್. ಚೇತನಾ, ಬಿ.ಎಂ.ವಾಗೀಶ್, ಎಂ.ಪಿ.ದಾರಕೇಶ್ವರಯ್ಯ ಹಾಗೂ ಪುಷ್ಪಾ ಡಿ.ಎಂ. ಎಂಬವರ ಜಾತಿ ಪ್ರಮಾಣ ಪತ್ರಗಳನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. 

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಅಭ್ಯರ್ಥಿಗಳ ಮೇಲೆ ಕೈಗೊಂಡಿರುವ ಕ್ರಮದ ಕುರಿತು ವರದಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News