ಜೈನ ಮುನಿಗಳ ರಕ್ಷಣೆಗೆ ಗೃಹ ಸಚಿವ ಡಾ. ಜಿ.‌ ಪರಮೇಶ್ವರ್ ಭರವಸೆ: ಆಮರಣಾಂತ ಉಪವಾಸ ಕೈಬಿಟ್ಟ ಗುಣಧರ ನಂದಿ ಮಹಾರಾಜ

Update: 2023-07-10 11:54 GMT

ಹುಬ್ಬಳ್ಳಿ:  ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕಾಮಕುಮಾರ‌ ಮುನಿ ಹತ್ಯೆ ಖಂಡಿಸಿ ಹಾಗೂ ಜೈನ ಮುನಿಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಆಮರಣಾಂತ ಉಪವಾಸ ಮುಂದುವರಿಸುವ ಎಚ್ಚರಿಕೆ ನೀಡಿದ್ದ ಇಲ್ಲಿನ  ವರೂರು ನವಗ್ರಹ ತೀರ್ಥ ಕ್ಷೇತ್ರದ 108 ಆಚಾರ್ಯ ಗುಣಧರ ನಂದಿ ಮಹಾರಾಜರು, ಗೃಹ ಸಚಿವ ಡಾ. ಜಿ.‌ ಪರಮೇಶ್ವರ್ ಅವರ ಭರವಸೆ ಮೇರೆಗೆ ಉಪವಾಸ ನಿರ್ಧಾರ ಕೈ ಬಿಟ್ಟಿದ್ದಾರೆ.

ವರೂರು ತೀರ್ಥಕ್ಷೇತ್ರದಲ್ಲಿ ಸೋಮವಾರ ಗೃಹ ಸಚಿವ ಜಿ. ಪರಮೇಶ್ವರ ಅವರ ಜೊತೆ ಚರ್ಚಿಸಿ, ನಂತರ ಮಾಧ್ಯಮದ ಎದುರು ತಮ್ಮ ನಿರ್ಧಾರ ಪ್ರಕಟಿಸಿದರು.

ನಂದಿ ಮಹಾರಾಜರು ಕೈಗೊಂಡಿರುವ ಅಮರಣ ಉಪವಾಸ ನಿರಶನ ಸ್ಥಳಕ್ಕೆ ಭೇಟಿ ನಿಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜೈನ ಸಮುದಾಯದ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅಭಯ ನೀಡಿದರು. 

ಈಗಾಗಲೇ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡು ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನು ಕ್ರಮಗಳಿಗೆ ಒಳಪಡಿಸಲಾಗಿದೆ.ರಾಜ್ಯ ಸರ್ಕಾರವು ಇತರೆ ಎಲ್ಲಾ ಧರ್ಮಗಳ ಆಚರಣೆ ಹಾಗೂ ಧರ್ಮಗುರುಗಳಿಗೆ ರಕ್ಷಣೆ ನೀಡಿದಂತೆ, ಜೈನ ಮುನಿಗಳ ಹಾಗೂ ಜೈನ ಬಸದಿಗಳ ರಕ್ಷಣೆಗೆ ಕಂಕಣಬದ್ದವಾಗಿದೆ ಎಂದು ಭರವೆ ನೀಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News