ಹಿಂದೂ ಧರ್ಮದ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಪರಮೇಶ್ವರ್

Update: 2023-09-06 18:35 GMT

ತುಮಕೂರು, ಸೆ.6: ಹಿಂದೂ ‘ರ್ಮದ ಹುಟ್ಟು ಮತ್ತು ಬೆಳವಣಿಗೆ ಕುರಿತಂತೆ ಮಂಗಳವಾರ ಶಿಕ್ಷಕರ ದಿನಾಚರಣೆಯ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ತಮ್ಮ ಹೇಳಿಕೆ ಕುರಿತು ಬು‘ವಾರ ಸ್ಪಷ್ಟನೆ ನೀಡಿದ್ದಾರೆ.

ಮ‘ುಗಿರಿಯಲ್ಲಿ ನಡೆದ ಕ್ಷೀರ ಬಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼನನ್ನ ಹೇಳಿಕೆಗೂ, ಉದಯನಿಧಿ ಸ್ಟಾಲಿನ್ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ. ಭಾರತದಲ್ಲಿರುವ ಧರ್ಮಗಳ ನಡುವಿನ ಹೋಲಿಕೆ ವೇಳೆ ಬೌದ್ಧ ಧರ್ಮ, ಜೈನ ಧರ್ಮ, ಇಸ್ಲಾಮ್ ‘ಧರ್ಮ, ಕ್ರಿಶ್ಚಿಯನ್ ಧರ್ಮಗಳಿಗೆ ಪ್ರವರ್ತಕರಿರುವಂತೆ, ಹಿಂದೂ ಧರ್ಮಕ್ಕೆ ಪ್ರವರ್ತಕರಿಲ್ಲ. ಅಲ್ಲದೆ, ಇದರ ಹುಟ್ಟಿನ ಬಗ್ಗೆ ನಿಗದಿತ ಕಾಲಮಾನವಿಲ್ಲ ಎಂದು ಹೇಳಿದ್ದೇನೆ. ಇದನ್ನೇ ಕೆಲವರು ವಿವಾದ ಎಂಬಂತಹ ರೀತಿಯಲ್ಲಿ ಬಿಂಬಿಸುತ್ತಿದ್ದಾರೆʼʼ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News