ಕೋಲಾರ | ಒತ್ತುವರಿ ತೆರವು ಕಾರ್ಯಾಚರಣೆ; ಒಂದೇ ದಿನದಲ್ಲಿ 120 ಎಕರೆ ಅರಣ್ಯ ಭೂಮಿ ಸರಕಾರಕ್ಕೆ ವಾಪಸ್​!

Update: 2023-08-23 16:35 GMT

ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 23: ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಸೂಚನೆಯ ಮೇರೆಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಸುತ್ತಮುತ್ತ ಅರಣ್ಯ ಭೂಮಿ ತೆರವು ಕಾರ್ಯಾಚರಣೆ ಇಂದು ನಸುಕಿನಿಂದಲೇ ಆರಂಭವಾಗಿದ್ದು, ಸುಮಾರು 148 ಎಕರೆಯಷ್ಟು ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ನೂರು ವರ್ಷಗಳ ಹಿಂದೆಯೇ ಅಂದಿನ ಮಹಾರಾಜರು ಅರಣ್ಯ ಎಂದು ಅಧಿಸೂಚನೆ ಹೊರಡಿಸಿದ್ದರೂ, 1990ರ ದಶಕದಲ್ಲಿ ಇಲ್ಲಿ ಒತ್ತುವರಿ ಆಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಅರಣ್ಯ ಭೂಮಿ ಮರು ವಶಕ್ಕೆ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದರು.

ಈಶ್ವರ ಖಂಡ್ರೆ ಆದೇಶದಂತೆ ಇಂದು ಅರಣ್ಯ ಇಲಾಖೆ ಸಿಬ್ಬಂದಿ, ಜೆಸಿಬಿಗಳೊಂದಿಗೆ ಶ್ರಿನಿವಾಸಪುರದ ಸರ್ವೆ ನಂಬರ್ 90ರಲ್ಲಿ 97 ಎಕರೆ, ಸರ್ವೆ ನಂ. 84 ಮತ್ತು 85ರಲ್ಲಿ 38 ಎಕರೆ, ಸರ್ವೆ ನಂ.51ರಲ್ಲಿ 12 ಎಕರೆ ಹಾಗೂ ಆವಲಕುಪ್ಪ ಗ್ರಾಮದ ಸರ್ವೆ ನಂ.135ರಲ್ಲಿ 4 ಎಕರೆ ಜಮೀನಿನಲ್ಲಿ ಕಾರ್ಯಾಚರಣೆ ಕೈಗೊಂಡು ಶೆಡ್‍ಗಳು, ಮಾವಿನ ಮರ ತೆರವು ಮಾಡಿ ಒಟ್ಟು 148 ಎಕರೆ ಅರಣ್ಯ ಭೂಮಿಯನ್ನು ಮರುವಶಪಡಿಸಿಕೊಂಡಿದ್ದಾರೆ ಎಂದು ಸಚಿವ ಕಚೇರಿಯ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News