ವೈಯಕ್ತಿಕ ತೇಜೋವಧೆ ಯಾವುದೇ ರಾಜಕಾರಣಿಗೆ ಭೂಷಣವಲ್ಲ: ಸಚಿವ ಕೆ. ಎನ್ ರಾಜಣ್ಣ

Update: 2024-08-12 09:12 GMT

ತುಮಕೂರು:  ಬಿಜೆಪಿಯವರು ಅವರ ಪಕ್ಷದಲ್ಲಿ ನಾಯಕತ್ವ ನಿರೂಪಿಸಲು ವಿನಾಕಾರಣ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ಈ ಆರೋಪಗಳಿಂದ ಅವರಿಗೆ ಯಾವುದೇ ರೀತಿಯ ಯಶಸ್ಸು ಉಂಟಾಗುವುದಿಲ್ಲ‌. ಎಂದು ಸಹಕಾರ ಸಚಿವ ಕೆ. ಎನ್ ರಾಜಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಲ್ಲೇ 25 ಹಗರಣಗಳು ನಡೆದಿದ್ದು, ಅದನ್ನು ಮಾದ್ಯಮಗಳು ಸಹ ವರದಿ ಮಾಡಿವೆ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ರೀತಿಯ ಹಗರಣಗಳು ನಡೆದಿಲ್ಲ ಎಂದರು.

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸಿ ಎಂ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ, ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ತಂದೆಯ ಹೆಸರು ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಯಾವಾಗಲೂ ತಾಳ್ಮೆಯ ರಾಜಕಾರಣ ಇರಬೇಕು. ಏಕವಚನದಲ್ಲಿ ಬೈಯ್ಯೋದು, ಮಾತನಾಡೋದು. ವಿವಾದವಲ್ಲದವುಗಳನ್ನು  ವಿವಾದ ಮಾಡುವುದು. ವೈಯಕ್ತಿಕವಾಗಿ ಕುಟುಂಬ ಸದಸ್ಯರ ಹೆಸರುಗಳನ್ನ ಪ್ರಸ್ತಾಪ ಮಾಡುವುದು ಇದು ಯಾವುದೇ ರಾಜಕಾರಣಿಗೆ ಭೂಷಣವಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿಗೆ  ಕುಟುಕಿದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News