ಉಡುಪಿ ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿಯ ‘ದಸರಾ ದರ್ಶನಿ-2024’ ವಿಶೇಷ ಪ್ಯಾಕೇಜ್ ಪ್ರವಾಸ

Update: 2024-09-28 14:27 GMT

ಉಡುಪಿ, ಸೆ.28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡುಪಿ ಘಟಕದಿಂದ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ದಸರಾ ದರ್ಶನಿ-2024 ಎಂಬ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅಕ್ಟೋಬರ್ 3ರಿಂದ 12ರವರೆಗೆ ಆಯೋಜಿಸಲಾಗುತ್ತಿದೆ.

ಪ್ಯಾಕೇಜ್‌1: ಪಂಚದುರ್ಗ ದರ್ಶನ: ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 7:30ಕ್ಕೆ ಹೊರಡುವ ನಿಗಮದ ಬಸ್, 9:00ಕ್ಕೆ ಸೌಕೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನಕ್ಕೆ, 10:30ಕ್ಕೆ ಕೊಲ್ಲೂರು ಶ್ರೀಮೂಕಾಂಬಿಕ ದೇವಸ್ಥಾನಕ್ಕೆ, 11:30ಕ್ಕೆ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಅಪರಾಹ್ನ 1:30ಕ್ಕೆ ಕಮಲಶಿಲೆ ಬ್ರಾಹ್ಮಿದು ರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ಮಧ್ಯಾಹ್ನದ ಊಟದ ಬಳಿಕ 3:00ಕ್ಕೆ ಅಲ್ಲಿಂದ ಹೊರಟು ಸಂಜೆ 4:30ಕ್ಕೆ ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ 5:15ಕ್ಕೆ ನೀಲಾವರ ಶ್ರೀಮಹಿಷ ಮರ್ದಿನಿ ದೇವಸ್ಥಾನವನ್ನು ಸಂದರ್ಶಿಸಲಾಗುವುದು. ಅಲ್ಲಿಂದ ಸಂಜೆ 6:15ಕ್ಕೆ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣ.

ಇದು ಒಟ್ಟು 223ಕಿ.ಮೀ. ಪ್ರವಾಸವಾಗಿದ್ದು, ಇದರಿಂದ ಪ್ರಯಾಣಿಸುವ ವಯಸ್ಕರಿಗೆ ಸೀಟಿಗೆ 400ರೂ. ಹಾಗೂ ಮಕ್ಕಳಿಗೆ 350 ರೂ.ಗಳನ್ನು ನಿಗದಿ ಪಡಿಸಲಾಗಿದೆ.

ಪ್ಯಾಕೇಜ್‌2 ಕ್ಷೇತ್ರ ದರ್ಶನ: ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 8:30ಕ್ಕೆ ಹೊರಡುವ ಬಸ್ 8:45ಕ್ಕೆ ಪುತ್ತೂರು ಭಗವತೀ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನಕ್ಕೆ, 9:45ಕ್ಕೆ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ, 10:25ಕ್ಕೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ 10:45ಕ್ಕೆ ಮರವಂತೆ ಬೀಚ್.

ಮರವಂತೆಯಿಂದ 11:45ಕ್ಕೆ ಹೊರಟು, ಅಪರಾಹ್ನ 1:00ಕ್ಕೆ ಉತ್ತರ ಕನ್ನಡದ ಮುರ್ಡೇಶ್ವರ, 2:30ಕ್ಕೆ ಅಲ್ಲಿಂದ ಹೊರಟು 3:00ಕ್ಕೆ ಇಡಗುಂಜಿಗೆ. ಅಲ್ಲಿಂದ 3:50ಕ್ಕೆ ಅಪ್ಸರಕೊಂಡ. ಅಪ್ಲರಕೊಂಡದಿಂದ ಸಂಜೆ 4:30ಕ್ಕೆ ಹೊರಟು 4:45ಕ್ಕೆ ಕಾಸರಕೋಡ್ ಇಕೋಬೀಚ್‌ಗೆ. ಅಲ್ಲಿಂದ 5:45ಕ್ಕೆ ಹೊರಟು ರಾತ್ರಿ 8:30ಕ್ಕೆ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ತಲುಪಲಾಗುವುದು.

ಇದು ಒಟ್ಟು 281 ಕಿ.ಮೀ. ದೂರದ ಪ್ರವಾಸವಾಗಿದ್ದು, ವಯಸ್ಕರಿಗೆ ಪ್ರತಿ ಸೀಟಿಗೆ 500 ರೂ ಹಾಗೂ ಮಕ್ಕಳಿಗೆ 400 ರೂ. ನಿಗದಿ ಪಡಿಸಲಾಗಿದೆ.

ಪ್ರವಾಸಕ್ಕೆ ಬರಲಿಚ್ಛಿಸುವವರು ಆನ್‌ಲೈನ್‌ನಲ್ಲಿ ಸೀಟು ಬುಕ್ಕಿಂಗ್‌ಗಾಗಿ -www.ksrtc.in-ಮತ್ತು ಮುಂಗಡ ಬುಕ್ಕಿಂಗ್‌ ಗಾಗಿ ಉಡುಪಿ ಡಾ.ವಿ.ಎಸ್. ಆಚಾರ್ಯ ಬಸ್ ನಿಲ್ದಾಣದ ಮೊಬೈಲ್ ನಂ: 9663266400ನ್ನು ಸಂಪರ್ಕಿಸಬಹುದು ಎಂದು ಕ.ರಾ.ರ.ಸಾ.ನಿಗಮದ ಉಡುಪಿ ಘಟಕ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News