ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ

Update: 2024-08-17 15:47 GMT

ಕಾರ್ಕಳ, ಆ.17: ವಿಪರೀತ ಮದ್ಯ ಸೇವನೆ ಹಾಗೂ ಮೂರ್ಚೆ ರೋಗದ ಖಾಯಿಲೆಯಿಂದ ಮಾನಸಿಕವಾಗಿ ನೊಂದ ಈದು ಗ್ರಾಮದ ಜಂಗೊಟ್ಟು ನಿವಾಸಿ ಚಿಂಗ ಎಂಬವರ ಮಗ ಗಣೇಶ್(33) ಎಂಬವರು ಆ.15ರಂದು ರಾತ್ರಿ ಮನೆಯ ತೋಟದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ವೈಯಕ್ತಿಕ ಕಾರಣದಿಂದ ಮನನೊಂದ ಬೈಕಾಡಿ ಗ್ರಾಮದ ಗಾಂಧಿನಗರ ನಿವಾಸಿ ಪರಮೇಶ್ವರ(70) ಎಂಬ ವರು ಆ.16ರಂದು ಸಂಜೆ ವೇಳೆ ಮನೆಯ ಕೊಠಡಿಯ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News