ಹೊಳೆಗೆ ಹಾರಿ ಯುವಕ ಆತ್ಮಹತ್ಯೆ

Update: 2023-10-04 15:25 GMT

ಕಾರ್ಕಳ : ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ದುರ್ಗ ಗ್ರಾಮದ ಮಲೆಹಿತ್ಲು ನಿವಾಸಿ ಸಂದೇಶ ಶೆಟ್ಟಿ(30) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಸೆ.30ರಂದು ಮನೆಯ ಹತ್ತಿರ ಇರುವ ದುರ್ಗ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರ ಮೃತದೇಹವು ಕಾವೇರಡ್ಕ ಎಂಬಲ್ಲಿರುವ ಹೊಳೆಯಲ್ಲಿ ಅ.4ರಂದು ಪತ್ತೆಯಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News