ಜಾನುವಾರು ಕಳವು: ದೂರು ದಾಖಲು

Update: 2023-11-03 16:23 GMT

ಅಮಾಸೆಬೈಲು, ನ.3: ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ ಗಂಡುಕರುವನ್ನು ಯಾರೋ ಅಪರಿಚಿತರು ಇಂದು ಬೆಳಗಿನ ಜಾವ 3:30ರ ಸುಮಾರಿಗೆ ಕಾರಿನಲ್ಲಿ ಬಂದು ಕದ್ದೊಯ್ದಿರುವುದಾಗಿ ಮಧುರ ಎಂಬವರು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಳಿದ ದನಕರುಗಳೊಂದಿಗೆ ಈ ಗಂಡುಕರುವನ್ನು ಮೇಯಲು ಹೊರಗೆ ಬಿಟ್ಟಿದ್ದು, ಸಂಜೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿತ್ತು. ಬೆಳಗಿನ ಜಾವ ನಾಯಿ ಬೊಗಳುವುದನ್ನು ಕೇಳಿ ಮನೆಯವರು ಹೊರಬಂದಾಗ ಕಾರು ಹೊರಟುಹೋಗಿತ್ತು. ಕೊಟ್ಟಿಗೆಗೆ ಬಂದು ನೋಡುವಾಗ ಈ ಗಂಡುಕರು ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News