ಉಡುಪಿ: ಓದಿನ ವಿಚಾರದಲ್ಲಿ ತಂದೆ ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಪುತ್ರಿ

Update: 2023-08-14 12:05 GMT

ಉಡುಪಿ: ಓದಿನ ವಿಚಾರದಲ್ಲಿ ತಂದೆ ಬೈದ ಕಾರಣಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.13ರಂದು ರಾತ್ರಿ ವೇಳೆ ಉಡುಪಿ ಚಿಟ್ಪಾಡಿಯ ಹನುಮಾನ್ ಗ್ಯಾರೇಜ್ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ಚಿಟ್ಪಾಡಿ ಹನುಮಾನ್ ಗ್ಯಾರೇಜ್ ರಸ್ತೆಯ ನಿವಾಸಿ ಕಿರಣ್ ಬಾಳಿಗ ಎಂಬವರ ಮಗಳು ಅಂಕಿತಾ ಕೆ.ಬಾಳಿಗ (21) ಎಂದು ಗುರುತಿಸಲಾಗಿದೆ.

ಮಣಿಪಾಲ ಕೆಎಂಸಿಯಲ್ಲಿ ಕೊನೆಯ ವರ್ಷದ ಬಿ.ಎಸ್ಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಅಂಕಿತಾ, ತಂದೆ ಓದಿನ ವಿಚಾರದಲ್ಲಿ ಬೈದ ಕಾರಣದಿಂದ ಮನನೊಂದು ಮನೆಯ ರೂಮಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News