ಆ.15ರಂದು ಕೆನರಾ ಬ್ಯಾಂಕಿನಿಂದ ಸ್ವಾತಂತ್ರ್ಯೋತ್ಸವ ಓಟ

Update: 2023-08-10 16:18 GMT

ಉಡುಪಿ, ಆ.10: ಪ್ಲಾಸ್ಟಿಕ್ ಮುಕ್ತ ಸಮಾಜ ಹಾಗೂ ರಕ್ತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿ ಹಾಗೂ ಟ್ರಜರಿ ಶಾಖೆಯ ವತಿಯಿಂದ ಆ.15ರಂದು ಸಾರ್ವಜನಿಕರಿಗಾಗಿ ಕೆನರಾ ಮ್ಯಾರಥಾನ್ ಸ್ವಾತಂತ್ರ್ಯೋತ್ಸವ ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮ್ಯಾರಥಾನ್ ಸಂಘಟನಾ ಸಮಿತಿಯ ಸಚಿನ್ ಶೆಟ್ಟಿ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಒಟ್ಟು ಮೂರು ವಿಭಾಗಗಳಲ್ಲಿ ಓಟ ನಡೆಯಲಿದೆ ಎಂದರು. 10ಕಿ.ಮೀ., 5ಕಿ.ಮೀ ಹಾಗೂ 3ಕಿ.ಮೀ ದೂರದ ಓಟ ನಡೆಯಲಿದೆ. ಇದರಲ್ಲಿ ಯಾರೂ ಯಾವುದೇ ವಯೋಮಾನದ ನಿರ್ಬಂಧವಿಲ್ಲದೇ ಭಾಗವಹಿಸಬಹುದು ಎಂದರು.

10ಕಿ.ಮೀ. ಓಟ ಮುಂಜಾನೆ 6:00ಗಂಟೆಗೆ, 5ಕಿ.ಮೀ. ಓಟ ಮುಂಜಾನೆ 6:30ಕ್ಕೆ ಹಾಗೂ 3ಕಿ.ಮೀ. ಓಟ ಬೆಳಗ್ಗೆ 7:00ಗಂಟೆಗೆ ಪ್ರಾರಂಭಗೊಳ್ಳಲಿದೆ. ಎಲ್ಲಾ ಓಟವು ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿ ಎದುರು ಪ್ರಾರಂಭ ಗೊಳ್ಳಲಿದೆ. ಮೂರು ಕಿ.ಮೀ.ಓಟ ಜಿಲ್ಲಾದಿಕಾರಿ ಕಚೇರಿ ಸಮೀಪದ ಕಾಯಿನ್ ಸರ್ಕಲ್‌ವರೆಗೆ, 5ಕಿ.ಮೀ. ಓಟ ಪೆರಂಪಳ್ಳಿಯ ಸಾಯಿರಾಧಾ ದವರೆಗೆ ಹಾಗೂ 10ಕಿ.ಮೀ. ಓಟ ಪೆರಂಪಳ್ಳಿ ಚರ್ಚ್‌ವರೆಗೆ ಓಡಿ ಮರಳಿ ವೃತ್ತ ಕಚೇರಿಗೆ ಬರುವುದಾಗಿದೆ ಎಂದರು.

ಓಟವನ್ನು ಪೂರ್ಣಗೊಳಿಸಿದವರಿಗೆ ಪದಕವನ್ನು ನೀಡಲಾಗುತ್ತದೆ. ಇದು ಸ್ಪರ್ಧೆಯಲ್ಲ. ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶವಷ್ಟೇ ಹೊಂದಿದೆ. ಯಾರೂ ಸಹ ಇದರಲ್ಲಿ ಪಾಲ್ಗೊಳ್ಳಬಹುದು ಎಂದರು.

ಆಸಕ್ತರು ಸಚಿನ್ ಶೆಟ್ಟಿ (9108242331), ವಿಶಾಲ್ ಸಿಂಗ್ (783891 1626) ಅಥವಾ ಸೂರಜ್ ಉಪ್ಪೂರು (9611758100) ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ವಿಶಾಲ್ ಸಿಂಗ್, ಸೂರಜ್ ಉಪ್ಪೂರು, ದುರ್ಗಾ ಪ್ರಸಾದ್, ಆನಂದ್, ಅಪ್ಪು ನಾಯಕ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News