ಕೋಟ - ಮೂಡುಗಿಳಿಯಾರು ಸರಕಾರಿ ಬಸ್ ಪುನರಾರಂಭ

Update: 2023-08-04 16:00 GMT

ಸಾಂದರ್ಭಿಕ ಚಿತ್ರ

ಉಡುಪಿ, ಆ.4: ಬ್ರಹ್ಮಾವರ ತಾಲೂಕು ಕೋಟ -ಮೂಡುಗಿಳಿಯಾರು- ಬೇಳೂರು ಸಂಪರ್ಕ ಸರಕಾರಿ ಬಸ್ಸು ಪುನರಾರಂಭಗೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

ಕೋವಿಡ್ ಸಂದರ್ಭದಲ್ಲಿ ನಿಲುಗಡೆಗೊಂಡ ಸರಕಾರಿ ಬಸ್ಸು ಪುನರಾರಂಭ ಗೊಂಡಿರುವುದರಿಂದ ಶಾಲಾ ಮಕ್ಕಳಿಗೆ ಅನುಕೂಲವಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News