ಕುಂದಾಪುರ: ಎರಡು ಮನೆಗಳಿಗೆ ನುಗ್ಗಿ ನಗನಗದು ಕಳವು

Update: 2023-07-30 15:38 GMT

ಕುಂದಾಪುರ, ಜು.30: ಕುಂಭಾಶಿ ಕೊರವಾಡಿ ಕ್ರಾಸ್ ಎಂಬಲ್ಲಿರುವ ಎರಡು ಮನೆಗಳಿಗೆ ಜು.29ರಂದು ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತು ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ರಾಮಚಂದ್ರ ಹೊಳ್ಳ ಎಂಬವರ ಮನೆಯ ಹಿಂಬದಿ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು, ಚಿನ್ನದ ಪೆಂಡೆಂಟ್ ಹಾಗೂ ನಗದು ಸೇರಿ ಒಟ್ಟು 1,34,000ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವು ದಾಗಿ ದೂರಲಾಗಿದೆ.

ಬಳಿಕ ಕಳ್ಳರು ಅಲ್ಲೇ ಸಮೀಪದ ಲಕ್ಷ್ಮಣ ಪೂಜಾರಿ ಎಂಬವರ ಮನೆಯ ಹಿಂಬದಿ ಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು, ಕಪಾಟಿನ ಒಳಗಿದ್ದ 2,50,000ರೂ. ಮೌಲ್ಯದ ಚಿನ್ನದ ಕರಿಮಣಿ ಸರಗಳನ್ನು ಕಳವು ಮಾಡಿ ಕೊಂಡು ಹೋಗಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News