ಕುಂದಾಪುರ ’ಶನಿವಾರ ಸಂತೆ’ಯಲ್ಲಿ ಹಲವರ ಮೊಬೈಲ್ ಕಳವು!

ಕುಂದಾಪುರ: ಕುಂದಾಪುರದ ಶನಿವಾರ ನಡೆಯುವ ಸಂತೆಗೆ ಬಂದ ಹಲವು ಮಂದಿ ಗ್ರಾಹಕರ ಮೊಬೈಲ್ ಫೋನ್ ಕಳವಾಗಿರುವ ಘಟನೆ ಮಾ.29 ರಂದು ನಡೆದಿದೆ.
ಕುಂದಾಪುರದಲ್ಲಿ ಶನಿವಾರ ನಡೆಯುವ ಸಂತೆಗೆ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಬರುವುದು ವಾಡಿಕೆಯಾಗಿದೆ. ಶುಕ್ರವಾರ ರಾತ್ರಿಯಿಂದ ವರ್ತಕರು ಆಗಮಿಸುವುದರಿಂದ ಶನಿವಾರ ಮುಂಜಾನೆಯಿಂದಲೇ ಉಭಯ ಜಿಲ್ಲೆಗಳಿಂದ ಗ್ರಾಹಕರು ಬರುತ್ತಾರೆ. ಪ್ರಸ್ತುತ ಯುಗಾದಿ ಹಾಗೂ ರಮಝಾನ್ ಕಾರಣ ಶನಿವಾರ ಸಂತೆಗೆ ಬರುವ ಜನರ ಸಂಖ್ಯೆಯೂ ಜಾಸ್ಥಿಯಾಗಿತ್ತು.
ಮಧ್ಯಾಹ್ನದ ಸುಮಾರಿಗೆ ಒಂದಷ್ಟು ಮಂದಿಯ ಜೇಬು ಹಾಗೂ ಮಹಿಳೆಯರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಮೊಬೈಲ್ಗಳು ಕಳವಾಗಿರುವುದು ತಿಳಿದುಬಂದಿದೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಕೆಲವರು ಪೊಲೀಸ್ ಠಾಣೆಗೆ ಆಗಮಿಸಿ ಮಾಹಿತಿ ನೀಡಿದ್ದಾರೆ. ಕಳವಿನ ಬಗ್ಗೆ ಗಮನಕ್ಕೆ ಬರುತ್ತಲೆ ಪೊಲೀಸರು ಎಚ್ಚರಿಕೆ ವಹಿಸಿದ್ದು ಡಿವೈಎಸ್ಪಿಎಚ್.ಡಿ.ಕುಲಕರ್ಣಿ, ಪೊಲೀಸ್ ನಿರೀಕ್ಷಕ ನಂಜಪ್ಪ ಹಾಗೂ ಎಸ್ಸೈ ನಂಜಾ ನಾಯ್ಕ್ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿದಿದೆ.