ಉಡುಪಿ: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ನಿಂದ ವೈದ್ಯರಿಗೆ ಸನ್ಮಾನ
ಉಡುಪಿ, ಜು.1: ನಗರದ ವಿಎಸ್ಟಿ ರಸ್ತೆಯ ವೆಸ್ಟ್ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಸೋಮವಾರ ನಡೆಯಿತು.
ಈ ಸಂದರ್ಭ ಉಡುಪಿ ಜಿಲ್ಲಾ ಸರ್ಜನ್ ಡಾ.ಅಶೋಕ್ ಕುಮಾರ್, ವೈದ್ಯರಾದ ಡಾ.ಶ್ರುತಿ ಬಲ್ಲಾಳ್, ಡಾ.ಅನಂತ ಶೆಣೈ, ಡಾ.ನಗ್ಮಾ ನೌಶದ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವೈದ್ಯ ಡಾ.ನೌಶದ್ ಕುಂಜಾಲು ಸನ್ಮಾನ ನೆರವೇರಿಸಿದರು.
ಬಳಿಕ ಮಾತನಾಡಿದ ಡಾ.ಶ್ರುತಿ ಬಲ್ಲಾಳ್, ಆರೋಗ್ಯ ಇದ್ದರೆ ಮಾತ್ರ ಯಾವುದೇ ಸಾಧನೆ ಮಾಡಲು ಸಾಧ್ಯ. ಹಾಗಾಗಿ ನಮ್ಮ ಆರೋಗ್ಯವನ್ನು ಸದಾ ತಪಾಸಣೆಗೆ ಒಳಪಡಿಸಿಕೊಂಡು ಇರಬೇಕು. ಇದರಿಂದ ಅನಾರೋಗ್ಯ ಬಾರದಂತೆ ನೋಡಿ ಕೊಳ್ಳಲು ಸಾಧ್ಯವಾಗುತ್ತದೆ. ಸುಲ್ತಾನ್ ಸಂಸ್ಥೆಯು ವೈದ್ಯರನ್ನು ಗುರುತಿಸಿ ಗೌರವಿಸಿರುವುದು ಬಹಳ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸುಲ್ತಾನ್ ಗೋಲ್ಡ್ ಉಡುಪಿ ಬ್ರಾಂಚ್ ಮೆನೇಜರ್ ಮನೋಜ್ ಎಸ್., ಸಿಬ್ಬಂದಿ ವರ್ಗದವರು ಉಪಸ್ಥಿತ ರಿದ್ದರು. ಸೇಲ್ಸ್ ಮೆನೇಜರ್ ವಾಹೀದ್ ಪಿ.ಎಂ. ಸ್ವಾಗತಿಸಿದರು. ಮಾರ್ಕೆಟಿಂಗ್ ಮ್ಯಾನೇಜರ್ ರಿಫಾ ಆಗಾ ಕಾರ್ಯಕ್ರಮ ನಿರೂಪಿಸಿದರು. ಸುಲ್ತಾನ್ ಗ್ರೂಪ್ನ ಫ್ಲೋರ್ ಮೆನೇಜರ್ ಸಿದ್ಧೀಕ್ ಹಸನ್ ವಂದಿಸಿದರು.