ಉಡುಪಿ ರೆಡ್‌ಕ್ರಾಸ್ ಸಂಸ್ಥೆಗೆ ವಂಚನೆ : ಪ್ರಕರಣ ದಾಖಲು

Update: 2024-07-03 16:37 GMT

ಉಡುಪಿ, ಜು.3: ಉಡುಪಿ ರೆಡ್‌ಕ್ರಾಸ್ ಸಂಸ್ಥೆಯ ಸರಿಯಾದ ಲೆಕ್ಕವನ್ನು ನಿರ್ವಹಿಸದೇ ಒಟ್ಟು 10,16,705ರೂ. ಹಣವನ್ನು ದುರುಪಯೋಗಪಡಿಸಿ ಕೊಂಡು ಮೋಸ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2020ರ ನ.12ರಿಂದ 2021ರ ನ.17ರವರೆಗೆ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಯಾಗಿ ಶಿವರಾಮ, ಕಾರ್ಯದರ್ಶಿಯಾಗಿ ಜಯರಾಮ ಖಜಾಂಚಿ ಯಾಗಿ ಅರವಿಂದ ಹಾಗೂ ಆಡಳಿತ ಮಂಡಳಿಯ ಸದಸ್ಯನಾಗಿ ಸನ್ಮತ್ ಕರ್ತವ್ಯ ನಿರ್ವಹಿಸಿದ್ದು, ಆ ಸಂದರ್ಭದಲ್ಲಿ ಸಂಸ್ಥೆ ಉಡುಪಿ ಜಿಲ್ಲಾ ಶಾಖೆಯ ಹಣವನ್ನು ಒಳಸಂಚು ನಡೆಸಿ, ಸರಿಯಾದ ಲೆಕ್ಕವನ್ನು ನಿರ್ವಹಿಸದೇ ಒಟ್ಟು 10,16,705 ರೂ. ಹಣವನ್ನು ಅಕ್ರಮವಾಗಿ ತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ನಂಬಿಕೆ ದ್ರೋಹ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News