ಕಾರ್ಕಳ: ಉಳುಮೆ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

Update: 2024-07-01 15:11 GMT

ಕಾರ್ಕಳ, ಜು.1: ಗದ್ದೆಯಲ್ಲಿ ಟ್ಯಾಕ್ಟರ್‌ನಿಂದ ಉಳಿಮೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಎದೆನೋವಿನಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳ್ಮಣ್ ಗ್ರಾಮದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಜೂ.30ರಂದು ನಡೆದಿದೆ.

ಮೃತರನ್ನು ಬೆಳ್ಮಣ್ ನಿವಾಸಿ ಸಂಜೀವ(40) ಎಂದು ಗುರುತಿಸಲಾಗಿದೆ. ಇವರು ಪ್ರಕಾಶ್ ಎಂಬವರ ಗದ್ದೆಯಲ್ಲಿ ಟ್ಯಾಕ್ಟರ್‌ ನಿಂದ ಉಳಿಮೆ ಕೃಷಿ ಕೆಲಸ ಮಾಡುತ್ತಿದ್ದು, ಈ ವೇಳೆ ಎದೆನೋವು ಕಾಣಿಸಿಕೊಂಡು ಅಸ್ವಸ್ತಗೊಂಡರೆನ್ನ ಲಾಗಿದೆ. ಇವರನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಬಂದಾಗ ಪರೀಕ್ಷೀಸಿದ ವೈದ್ಯರು ಸಂಜೀವ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News