ದ.ಸಂ.ಸ ರಾಜ್ಯ ಸಂಘಟನಾ ಸಂಚಾಲಕರಾಗಿ ಉಡುಪಿಯ ಸುಂದರ ಮಾಸ್ತರ್ ಆಯ್ಕೆ

Update: 2024-10-06 16:46 GMT

ಸುಂದರ ಮಾಸ್ತರ್

ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾಗಿ ದಲಿತ ನಾಯಕ ಪ್ರಗತಿಪರ ಹೋರಾಟಗಾರ ಸುಂದರ ಮಾಸ್ತರ್ ಆಯ್ಕೆಯಾಗಿದ್ದಾರೆ.

ತುಮಕೂರಿನಲ್ಲಿ ರವಿವಾರ ನಡೆದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನದಲ್ಲಿ ಈ ಆಯ್ಕೆ ಮಾಡಲಾಯಿತು.

ದಲಿತ ಸಂಘರ್ಷ ಸಮಿತಿ ಹುಟ್ಟಿದಾಗಿನಿಂದಲೂ ಸತತ ನಲವತ್ತು ವರ್ಷಕ್ಕೂ ಮಿಕ್ಕಿ ಉಡುಪಿಯಲ್ಲಿ ದಲಿತ ಚಳುವಳಿಯನ್ನು ಕಟ್ಟಿ ನಡೆಸಿಕೊಂಡು ಬರುತ್ತಿರುವ ಸುಂದರ ಮಾಸ್ತರ್ ಉಡುಪಿ ಜಿಲ್ಲೆಯ ಶೋಷಿತ ಸಮುದಾಯದ ಧ್ವನಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News