ಉಡುಪಿ: ನಾಲ್ಕೂರಿನಲ್ಲಿ ರಕ್ಷಣಾ ಇಲಾಖೆಗೆ ಭೂಮಿ ಹಂಚಿಕೆಯ ಸಂಬಂಧ ಚರ್ಚೆ
Update: 2025-03-25 20:14 IST

ಉಡುಪಿ, ಮಾ.25: ಭಾರತೀಯ ರಕ್ಷಣಾ ಇಲಾಖೆಗೆ ಭೂಮಿ ನೀಡುವ ಕುರಿತು ಭೂಮಿ ಹಂಚಿಕೆಯ ಸಂಬಂಧ ವಾಯು ಪಡೆಯ ಏರ್ ಮಾರ್ಷಲ್ ಮಣಿಕಂಠ ಅವರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ವಾಯುಪಡೆಯ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಪಿ.ಎ ಶೈಲೇಶ್ ಕುಮಾರ್, ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗಡೆ ಉಪಸ್ಥಿತರಿದ್ದರು.
ಚರ್ಚೆಯ ಬಳಿಕ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಸ.ನಂ. 30, 31, 34ರ ಜಾಗವನ್ನು ಏರ್ ಮಾರ್ಷಲ್ ಮಣಿಕಂಠ ಅವರು ಖುದ್ದು ಪರಿಶೀಲನೆ ನಡೆಸಿದರು.
