ಶಿರ್ವ: ವಿದ್ಯುತ್ ಆಘಾತದಿಂದ ಯುವಕ ಮೃತ್ಯು

Update: 2023-11-06 16:43 GMT

ಶಿರ್ವ : ಅಡಿಕೆ ಕೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ಆಘಾತಕೆ ಒಳಗಾಗಿ ಮೃತಪಟ್ಟ ಘಟನೆ ಕುರ್ಕಾಲು ಎಂಬಲ್ಲಿ ನ.6ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ಪಾದೂರು ನಿವಾಸಿ ಪವನ್ ಶ್ರವಣ್ ಸೇವಂತ್(20) ಎಂದು ಗುರುತಿಸಲಾಗಿದೆ. ಇವರು ಕುರ್ಕಾಲು ಗ್ರಾಮದ ಸುರೇಶ್ ಎಂಬವರಿಗೆ ಸಂಬಂಧಿಸಿದ ತೋಟದಲ್ಲಿ ಅಲ್ಯುಮಿನಿಯಂ ಪೈಪ್‌ಗೆ ಕತ್ತಿಯನ್ನು ಕಟ್ಟಿ ಅಡಿಕೆ ಯನ್ನು ಕೀಳುತ್ತಿದ್ದರು. ಈ ವೇಳೆ ಪೈಪ್ ಸಮೀಪದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ತಗಲಿದ್ದು, ಇದರಿಂದ ವಿದ್ಯುತ್ ಆಘಾತಕ್ಕೆ ಒಳಗಾದ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News