ಎರಡು ಪ್ರತ್ಯೇಕ ಪ್ರಕರಣ: ನೇಣು ಬಿಗಿದು ಇಬ್ಬರು ಆತ್ಮಹತ್ಯೆ

Update: 2024-09-19 16:36 GMT

ಕಾಪು, ಸೆ.19: ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಉಳಿಯಾರಗೋಳಿ ಗ್ರಾಮದ ರಮೇಶ್ (49) ಎಂಬವರು ಬುಧವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯವರೊಂದಿಗೆ ರಾತ್ರಿ ಊಟ ಮಾಡಿ ಮಲಗಿದ್ದ ರಮೇಶ್, 1ಗಂಟೆಗೆ ನೋಡುವಾಗ ಮಲಗಿದಲ್ಲಿ ಕಾಣಿಸದೇ ಇದ್ದಾಗ ಪತ್ನಿ ಹುಡುಕಿದ್ದು ಮನೆಯ ಬದಿಯಲ್ಲಿ ಕಬ್ಬಿಣದ ಪಕ್ಕಾಸಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯ ಲ್ಲಿದ್ದು ಕೂಡಲೇ ಅವರನ್ನು ಉಡುಪಿಯ ಖಾಸಗಿ ಕರೆದುತಂದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.

ಸುಮಾರು ಎರಡು ತಿಂಗಳಿನಿಂದ ಎದೆನೋವಿನಿಂದ ಬಳಲುತಿದ್ದ ರಮೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಇದೇ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿ: ನಾಡ್ಪಾಲು ಗ್ರಾಮದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಶೀನಾ (73) ಎಂಬವರು ಅನಾರೋಗ್ಯದ ವಿಷಯದಲ್ಲಿ ಮನ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಖಿನ್ನತೆಗೊಳಗಾಗಿ ಬುಧವಾರ ಬೆಳಗ್ಗೆ 11ರಿಂದ ಅಪರಾಹ್ನ ಒಂದು ಗಂಟೆಯ ನಡುವೆ ನಾಡ್ಪಾಲು ಗ್ರಾಮದ ಸೋಮೇಶ್ವರ ಬೈದಬೆಳಾರ್ ಎಂಬಲ್ಲಿರುವ ತಮ್ಮ ತೋಟದಲ್ಲಿರುವ ಗೇರುಮರಕ್ಕೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News