ಉಡುಪಿ: ಮುಂಬೈಯಿಂದ ಬಂದ ವ್ಯಕ್ತಿ ಊರಲ್ಲಿ ಆತ್ಮಹತ್ಯೆ

Update: 2023-09-08 06:54 GMT

ಉಡುಪಿ, ಸೆ.8: ಮುಂಬೈಯಿಂದ ರಾತ್ರಿ ವೇಳೆ ಬಂದ ವ್ಯಕ್ತಿಯೊಬ್ಬರು ಮನೆಯ ಹೊರಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಅಂಬಾಗಿಲು ಪೇರಂಪಲ್ಲಿಯ ಕಕ್ಕಿಂಜೆ ದೇವಿನಗರ ಎಂಬಲ್ಲಿ ನಡೆದಿದೆ.

ಮೃತರನ್ನು ದೇವಿನಗರದ ಸುಕೇಶ್ ಶೆಟ್ಟಿ(51) ವರ್ಷ ಎಂದು ಗುರುತಿಸಲಾಗಿದೆ. ಮುಂಬೈಯಲ್ಲಿ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ರಾತ್ರಿ ಹೊತ್ತಿನಲ್ಲಿ ಮುಂಬೈಯಿಂದ ಆಗಮಿಸಿ, ಮನೆಯ ಹೊರಗಡೆ ಇರುವ ಬಟ್ಟೆ ಒಗೆಯುವ ಸ್ಥಳದಲ್ಲಿ ಕಬ್ಬಿಣದ ಪೈಪಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮಣಿಪಾಲ ಶವಾಗಾರಕ್ಕೆ ಶವ ಕೊಂಡು ಹೋಗಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News