ಪತಿ ಮನೆಯವರ ಕಿರುಕುಳ ಆರೋಪ: ಮಹಿಳೆ ಆತ್ಮಹತ್ಯೆ

Update: 2024-08-23 15:46 GMT

ಬೈಂದೂರು, ಆ.23: ಪತಿಯ ಮನೆಯವರ ಕಿರುಕುಳದಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಬ್ರಹ್ಮಾವರ ಚಾಂತಾರು ನಿವಾಸಿ ಸದಾಶಿವ ಎಂಬವರ ಮಗಳು ವಿನೋದ ಎಂದು ಗುರುತಿಸಲಾಗಿದೆ. ಇವರು ಸುಮಾರು 18 ವರ್ಷಗಳ ಹಿಂದೆ ಹೆರಂಜಾಲು ಗ್ರಾಮದ ಚಿಕ್ಕಯ್ಯ ಎಂಬವರ ಮಗ ಪಾಂಡುರಂಗ ಅವರನ್ನು ಮದುವೆ ಯಾಗಿದ್ದು, ಬಳಿಕ ಆಕೆ ತನ್ನ 8 ವರ್ಷದ ಮಗುವಿನೊಂದಿಗೆ ತನ್ನ ಗಂಡನ ಮನೆಯಾದ ಹೆರಂಜಾಲು ಮನೆಯಲ್ಲಿ ತನ್ನ ಅತ್ತೆ ಜಲಜಾ ಹಾಗೂ ಅತ್ತಿಗೆ ಅಂಬಿಕಾಳೊಂದಿಗೆ ವಾಸವಾಗಿದ್ದರು.

ಪಾಂಡುರಂಗ ಮುಂಬೈನಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದು, ಆಕೆಯ ಗಂಡ, ಜಲಜಾ ಮತ್ತು ಅತ್ತಿಗೆ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ. ಇವರ ಕಿರುಕುಳದಿಂದ ಬೇಸತ್ತ ವಿನೋದ ಆ.22ರಂದು ರಾತ್ರಿ ಪತಿ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News