ಹೊಸಪೇಟೆ: ಹುಚ್ಚುನಾಯಿ ಕಡಿತ; ಮಗುವಿಗೆ ಗಂಭೀರ ಗಾಯ

Update: 2024-09-17 07:56 GMT

 ಹುಚ್ಚುನಾಯಿ ಕಡಿತ‌ಕ್ಕೊಳಗಾದ  ಮಗು

ವಿಜಯನಗರ : ಹುಚ್ಚುನಾಯಿಯೊಂದು 3 ವರ್ಷದ ಮಗುವಿಗೆ ಕಚ್ಚಿದ್ದರಿಂದ ಮಗುವಿಗೆ ಗಂಭೀರ ಗಾಯವಾದಂತಹ ಘಟನೆ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ನಡೆದಿದೆ.

ರಾಮ ಹಾಗೂ ಲೋಕಮ್ಮ ಅವರ ಮಗಳು ಜನನಿ(3) ಮೇಲೆ ಹುಚ್ಚುನಾಯಿ ದಾಳಿ ನಡೆಸಿದ್ದು, ಮುಖದ ಭಾಗದಲ್ಲಿ ತೀವ್ರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬಳ್ಳಾರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News