ಹೊಸಪೇಟೆ | ಮಿಲಾದ್ ಕಮಿಟಿ ವತಿಯಿಂದ ಶಾಂತಿ ಸಭೆ

Update: 2024-09-05 10:45 GMT

ವಿಜಯನಗರ : ಹೊಸಪೇಟೆ ನಗರದ ಉಮರ್ ಸಭಾಂಗಣದಲ್ಲಿ ಮಿಲಾದ್ ಕಮಿಟಿ ವತಿಯಿಂದ ಶಾಂತಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪ್ರವಾದಿ ಪೈಗಂಬರ್ ಅವರು ಮಾನವ ಕುಲಕ್ಕೆ ಕೊಟ್ಟಿರುವ ಶಾಂತಿ ಸೌಹಾರ್ದತೆಯ ಸಂದೇಶವನ್ನು ಸಾರುತ್ತಾ ಅವರ ನೆನಪಲ್ಲಿ ಹುಟ್ಟು ಹಬ್ಬವನ್ನು ಆಚರಿಸಬೇಕು. ಡಿಜೆ, ಮ್ಯೂಸಿಕ್, ಬಳಕೆ ಮಾಡುವಂತಿಲ್ಲ ಎಂದು ಕಮಿಟಿಯ ಅಧ್ಯಕ್ಷರಾದಂತಹ ಬಡವಲಿ ಹೇಳಿದರು.

ಸಭೆಯಲ್ಲಿ ಹೊಸಪೇಟೆಯ ಮುಸ್ಲಿಂ ಧರ್ಮ ಗುರುಗಳು, ಅಂಜುಮನ್ ಕಮಿಟಿಯ ಸರ್ವ ಸದಸ್ಯರು, ವಕ್ಸ್ ಮಂಡಳಿ ಅಧ್ಯಕ್ಷರು, ನಗರದ ನಲವತ್ತಕ್ಕೂ ಹೆಚ್ಚು ಮಸೀದಿಯ ವ್ಯವಸ್ಥಾಪಕರು(ಮುತ್ತಲ್ಲಿಂ), ಮತ್ತು ಹಿರಿಯರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News