ಮಂಗಳೂರು ದಸರಾದಲ್ಲಿ ಸೌಹಾರ್ದತೆಯ ಸ್ತಬ್ಧಚಿತ್ರ, ಶ್ವೇತವರ್ಣದ ಟೀ ಶರ್ಟ್ ಅನಾವರಣ

Update: 2023-10-21 17:19 GMT

ಮಂಗಳೂರು: ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೆಯೋಭಿವೃದ್ಧಿ ಸಂಘ, ಸಂತ ಮದರ್ ತೆರೇಸಾ ವಿಚಾರ ವೇದಿಕೆ, ಭಗತ್ ಸಿಂಗ್ ವಾರಿಯರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ದಸರಾದ ವೈಭವದ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳಲಿರುವ ಸ್ತಬ್ಧಚಿತ್ರಕ್ಕೆ ಪೂರಕವಾಗಿ ಯುವಜನರಿಗಾಗಿ ವಿನ್ಯಾಸಗೊಳಿಸಿದ ಶ್ವೇತ ವರ್ಣದ ಟೀ ಶರ್ಟ್ ಅನ್ನು ಮೂರು ಪ್ರಮುಖ ಸ್ಥಳಗಳಲ್ಲಿ ಶನಿವಾರ ಅನಾವರಣಗೊಳಿಸಲಾಯಿತು.

ಭಗತ್ ಸಿಂಗ್ ವಾರಿಯರ್ಸ್ ವತಿಯಿಂದ ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್‌ಎಸ್ ಸಾಯಿರಾಂ ಅವರು ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಮತ್ತು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ವತಿಯಿಂದ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಅವರು ಕುಲಶೇಖರ ಚರ್ಚ್‌ನ ಹೊರಾಂಗಣದಲ್ಲಿ, ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಗೌರವ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್, ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಅನಾವರಣಗೊಳಿಸಿದರು.

ಈ ಸಂದರ್ಭ ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಮಿತಿ ಸದಸ್ಯ ವೇದ ಕುಮಾರ್, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡ ರಾದ ಮುಹಮ್ಮದ್ ಮುಸ್ತಫ, ಹರೀಶ್ ಪೂಜಾರಿ, ಮುಹಮ್ಮದ್ ಆಸೀಫ್, ಅಬ್ದುಲ್ ರೆಹಮಾನ್, ಆದಂ ಬಜಾಲ್, ರಿಯಾಝ್, ಪ್ರವೀಣ್, ಲಕ್ಷ್ಮಣ್ ಉಪಸ್ಥಿತರಿದ್ದರು. 






 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News