‘ಡ್ರಗ್ಸ್ ಮುಕ್ತ ಕುದ್ರೋಳಿ’ ಮುಸ್ಲಿಂ ಐಕ್ಯತಾ ವೇದಿಕೆಯಿಂದ ಬೃಹತ್ ಜನಜಾಗೃತಿ ರ‍್ಯಾಲಿ

Update: 2023-08-08 17:33 GMT

ಮಂಗಳೂರು: ಯುವ ಸಮೂಹದಲ್ಲಿ ಡ್ರಗ್ಸ್ ಸೇವನೆಯ ದುಷ್ಪರಿಣಾಮದ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಕುದ್ರೋಳಿಯಲ್ಲಿ ಮುಸ್ಲಿಮ್ ಐಕ್ಯತಾ ವೇದಿಕೆಯ ನೇತೃತ್ವದಲ್ಲಿ ಬೃಹತ್ ಜನಜಾಗೃತಿ ರ‍್ಯಾಲಿ ನಡೆಯಿತು.

ಜಾಮಿಅ ಮಸೀದಿ ಕುದ್ರೋಳಿಯಿಂದ ಕಂಡತ್ ಪಳ್ಳಿ ಜುಮಾ ಮಸೀದಿಯವರೆಗೆ ನಡೆದ ಜನಜಾಗೃತಿ ರ‍್ಯಾಲಿಯ ನೇತೃತ್ವವನ್ನು ಅಧ್ಯಕ್ಷ ಮುಹಮ್ಮದ್ ಯಾಸೀನ್ ಕುದ್ರೋಳಿ ವಹಿಸಿದ್ದರು.

ದಿಕ್ಸೂಚಿ ಬಾಷಣ ಮಾಡಿದ ಡಿವೈಎಫ್‌ಐ ರಾಜ್ಯಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಡ್ರಗ್ಸ್ ಮುಕ್ತ ಕುದ್ರೋಳಿ ಅಭಿಯಾನಕ್ಕೆ ಇಡೀ ಊರಿಗೆ ಊರೇ ಹೋರಾಟದಲ್ಲಿ ನಿರತರಾಗಿದ್ದು ಇಡೀ ಜಿಲ್ಲೆಗೆ ಮಾದರಿಯಾಗಲಿದೆ ಎಂದರು.

ನಂತರ ಹಲವು ಎಚ್ಚರಿಕೆಯ ಘೋಷಣೆಗಳೊಂದಿಗೆ ಜಾಥವು ಸಾಗಿತು. ಕಾರ್ಯಕ್ರಮದ ಕೊನೆಯಲ್ಲಿ ಕಾರ್ಪೊರೇಟರ್ ಶಂಸುದ್ದೀನ್ ಐಕ್ಯತೆ ವೇದಿಕೆ ಪರವಾಗಿ ಡ್ರಗ್ಸ್ ಮಾರಾಟಗಾರರಿಗೆ ಸ್ಪಷ್ಟ ಎಚ್ಚರಿಕೆ ನೀಡಿದರು.

ರ‍್ಯಾಲಿಯಲ್ಲಿ ಮಾಜಿ ಮೇಯರ್ ಕೆ ಅಶ್ರಫ್, ಐದು ಮಸೀದಿ ಖತೀಬರುಗಳಾದ ಜುಬೈರ್ ಮೌಲಾನಾ ಜಾಮಿಯ ಮಸೀದಿ, ಕೆ ಎಸ್ ರಿಯಾಝ್ ಫೈಝಿ ನಡುಪಳ್ಳಿ, ಮುಹಮ್ಮದ್ ಬಾಖವಿ ಮೊಯ್ದೀನ್ ಪಳ್ಳಿ, ಅಹ್ಮದ್ ಅಲಿ ಖಾಸಿಮಿ ಸಲಫಿ ಮಸ್ಜಿದ್, ಪಿ ಎ ಮುಹಮ್ಮದ್ ರಫೀಕ್ ಮದನಿ ಕಂಡತ್ ಪಳ್ಳಿ , ಮಕ್ಬೂಲ್ ಕೋಶಾಧಿಕಾರಿ ಜಾಮಿಯಾ, ಸಂಚಾಲಕ ಎಂ ಅಝೀಝ್ ಕುದ್ರೋಳಿ , ಕಂಡತ್ ಪಳ್ಳಿ ಅಧ್ಯಕ್ಷ ಶಮೀಮ್ ಅಹ್ಮದ್ , ಕಾರ್ಯದರ್ಶಿ ಮಕ್ಬೂಲ್ ಅಹ್ಮದ್,ಉಪಾಧ್ಯಕ್ಷ ಎಸ್.ಎ. ಖಲೀಲ್ ಕಂಡತ್ ಪಳ್ಳಿ , ಸಹ ಕಾರ್ಯದರ್ಶಿಗಳಾದ ಹಾರಿಸ್ ಕುದ್ರೋಳಿ , ಎನ್ ಕೆ ಅಬೂಬಕ್ಕರ್ ಮುಝೈರ್ ಕುದ್ರೋಳಿ , ಸಮಿತಿ ಸದಸ್ಯರುಗಳಾ ಮುಸ್ತಾಕ್ ಕುದ್ರೋಳಿ , ಅಬ್ದುಲ್ ಲತೀಫ್ ಕ್ರಿಸ್ಟಲ್, ಅಬ್ದುಲ್ ವಹಾಬ್, ಬಿ ಎ ಇಸ್ಮಾಯಿಲ್ ಉಪಸ್ಥಿತರಿದ್ದರು.

ಜಾಮಿಅ ಮಸೀದಿ ಇಮಾಮ್ ಮೌಲಾನ ಮನ್ನಾನ್ ಸಾಬ್ ದುಆದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಹಾಜಿ ಬಿ ಅಬೂಬಕರ್ ಸ್ವಾಗತಿಸಿ, ಅಶ್ರಫ್ ಕಿನಾರ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿಗೆ ಮಿತಿ ಮೀರಿದ ಡ್ರಗ್ಸ್ ಮಾರಾಟ ಮತ್ತು ಸೇವನೆಯಿಂದ ಯುವ ಪೀಳಿಗೆಯು ದಾರಿ ತಪ್ಪುತ್ತಿರುವುದನ್ನು ಗಂಭೀರ ವಾಗಿ ಪರಿಗಣಿಸಿ ಕುದ್ರೋಳಿಯಲ್ಲಿ ಐದು ಮಸೀದಿ ಆಡಳಿತ ಮಂಡಳಿ, ಸಂಘ ಸಂಸ್ಥೆಗಳ ಪ್ರತಿನಿಧಿಯನ್ನೊಳಗೊಂಡ ಮುಸ್ಲಿಂ ಐಕ್ಯತ ವೇದಿಕೆಯು ಕಳೆದ ಒಂದು ತಿಂಗಳಿನಿಂದ ‘ಡ್ರಗ್ಸ್ ಮುಕ್ತ ಕುದ್ರೋಳಿ, ಯುವ ಪೀಳಿಗೆಯ ರಕ್ಷಣೆಯೇ ನಮ್ಮ ಗುರಿ ’ ಎಂಬ ಘೋಷಣೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕಳೆದ ವಾರ ಐದು ಮಸೀದಿಯ ವ್ಯಾಪ್ತಿಯ ಸುಮಾರು 2000 ಸಾವಿರದಷ್ಟು ಮನೆ ಮನೆಗೆ ನಾಯಕರು ನಾಗರಿಕರ ಸಹಕಾರದೊಂದಿಗೆ ತೆರಳಿ ಕರಪತ್ರ ವಿತರಣೆ ಮೂಲಕ ಜಾಗೃತಿ ಮೂಡಿಸಿದೆ.

ಆ. 9ರಂದು ರಾತ್ರಿ 7.15ಕ್ಕೆ ಕುದ್ರೋಳಿ ಜಂಕ್ಷನ್‌ನಲ್ಲಿರುವ ಉರ್ದು ಶಾಲೆಯಲ್ಲಿ ಬೃಹತ್ ಜನಜಾಗೃತಿ ಸಮಾವೇಶ ನಡೆಯಲಿದೆ.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News