ಉಳ್ಳಾಲ | ಮುಕ್ಕಚ್ಚೇರಿಯಲ್ಲಿ ಆವರಣ ಗೋಡೆ ಕುಸಿತ: ಮನೆಗೆ ಹಾನಿ

Update: 2023-07-09 06:38 GMT

ಉಳ್ಳಾಲ, ಜು.9: ಇಲ್ಲಿನ ನಗರಸಭಾ ವ್ಯಾಪ್ತಿಯ 27ನೇ ವಾರ್ಡ್ ನ ಮುಕ್ಕಚ್ಚೇರಿಯ ಯು.ಟಿ. ಕಾಂಪೌಂಡ್ ಬಳಿ ದೇವಸ್ಥಾನ ವೊಂದರ ಆವರಣ ಗೋಡೆ ಕುಸಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ಆವರಣ ಗೋಡೆ ಕುಸಿದು ಕಲ್ಲುಗಳು ಬಿದ್ದ ಪರಿಣಾಮ ಪಕ್ಕದ ಅಲ್ತಾಫ್ ಎಂಬವರ ಮನೆಗೆ ಹಾನಿಯಾಗಿದೆ.

ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಈ ಬಗ್ಗೆ ಮಾಹಿತಿ ಪಡೆದ ನಗರಸಭೆ ಸದಸ್ಯ ಖಲೀಲ್ ಭೇಟಿ ನೀಡಿ ಪರಿಶೀಲಿಸಿದ್ದರು. ನಗರಸಭೆ ಪೌರ ಕಾರ್ಮಿಕರ ಮೂಲಕ ಕಲ್ಲುಗಳನ್ನು ತೆರವುಗೊಳಿಸಲಾಗಿದೆ.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News