ಮನೆಗೆ ನುಗ್ಗಿ ನಗ ನಗದು ಕಳವು: ಪ್ರಕರಣ ದಾಖಲು

Update: 2024-08-18 15:21 GMT

ಶಂಕರನಾರಾಯಣ, ಆ.18: ಅಂಪಾರು ಗ್ರಾಮದ ಮನೆಗೆ ಆ.17ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಸವಿತಾ ಎಂಬವರ ಮನೆಯ ಹಿಂಬದಿಯ ಅಡುಗೆ ಕೊಣೆಯ ಬಾಗಿಲಿನ ಚಿಲಕವನ್ನು ಮುರಿದು ಒಳಗಡೆ ನುಗ್ಗಿದ ಕಳ್ಳರು, ಬೆಡ್ ರೂಮ್‌ನ ಕಾಪಾಟಿನಲ್ಲಿದ್ದ 2 ಚಿನ್ನದ ಬಳೆ, ಚಿನ್ನದ ಚೈನ್, ಮುತ್ತಿನ ಸರ ಹಾಗೂ 20000ರೂ. ನಗದು ಕಳವು ಮಾಡಿ ಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,40,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News