ಸಿರಿಬಾಗಿಲು ವೆಂಕಪ್ಪಯ್ಯ ಮ್ಯೂಸಿಯಂಗೆ ಎಂಪಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ವಿದ್ಯಾರ್ಥಿಗಳು ಭೇಟಿ

Update: 2024-07-26 15:25 GMT

ಪೆರಿಯಡ್ಕ: ಎಂಪಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ಪೆರಿಯಡ್ಕ ವಿದ್ಯಾರ್ಥಿಗಳು ಪ್ರಿನ್ಸಿಪಾಲ್ ಡಾ. ಅಬ್ದುಲ್ ಜಲೀಲ್ ರವರ ನಿರ್ದೇಶನದಂತೆ ತಮ್ಮ ಪಠ್ಯದ CBSE ಅಧ್ಯಯನದ ವಿಚಾರದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಮ್ಯೂಸಿಯಂ ಗೆ ಭೇಟಿ ನೀಡಿದರು.

ಅದ್ಯಾಪಕರಾದ ಸಫುಬನ್‌ ಪಿ, ಎಂ ಎಸ್‌ ಸುಜನ್ಪಲ್‌ ಅವರು ನೇತೃತ್ವ ವಹಿಸಿದ್ದರು. ಯಕ್ಷಗಾನದ ಎಲ್ಲಾ ಮಾದರಿಗಳನ್ನು, ಕೀರ್ತಿಶೇಷ ಕಲಾವಿದರ ಭಾವಚಿತ್ರ, ಇನ್ನಿತರ ವಿವರಗಳನ್ನು ನೋಡಿ, ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಷ್ಠಾನದ ಅಧ್ಯಕ್ಷರು, ಸದಸ್ಯರು ಯಕ್ಷಗಾನದ ವೇಷಭೂಷಣದ ವೈಶಿಷ್ಟ್ಯಗಳನ್ನು ವಿವರಿಸಿದರು. ಈ ಭೇಟಿ ಶಿಕ್ಷಣ ಸಚಿವಾಲಯದ CBSE ಶಿಕ್ಷಾ ಸಪ್ತಾಹದ ಆಚರಣೆಯ ನಿಮಿತ್ತ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News