ಎಸ್ಕೆಎಸೆಸ್ಸೆಫ್ ವಿಖಾಯ ಡೇ ಪೋಸ್ಟರ್ ಬಿಡುಗಡೆ
ಮಂಗಳೂರು: ಎಸ್ಕೆಎಸೆಸ್ಸೆಫ್ ವಿಖಾಯ ದ.ಕ ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ವಿಖಾಯ ಡೇ ಪ್ರಯುಕ್ತ ಅ.2ರಂದು ಮಧ್ಯಾಹ್ನ 2ಕ್ಕೆ ಕುತ್ತಾರ್ ಮದನಿ ನಗರದಿಂದ ದೇರಳಕಟ್ಟೆ ಜಂಕ್ಷನ್ವರೆಗೆ ನಡೆಯುವ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಜಾಥಾದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.
ಎಸ್ಕೆಎಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಸಮಿತಿಯ ಮದೀನಾ ಪ್ಯಾಶನ್ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ಅಧ್ಯಕ್ಷ ಸೈಯದ್ ಅಮೀರ್ ತಂಳ್ ರಾಜ್ಯ ಸಹಚಾರಿ ಅಧ್ಯಕ್ಷ ಇಮ್ತಿಯಾಝ್ ಇಡ್ಯಾರಿಗೆ ನೀಡಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಶಮೀರ್ ದಾರಿಮಿ ಕೊಲ್ಲಂ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ, ಕೋಶಾಧಿಕಾರಿ ಅಶ್ರಫ್ ಮರೋಡಿ, ಸಂಘಟನಾ ಕಾರ್ಯದರ್ಶಿ ಅಡ್ವೊಕೇಟ್ ಬದ್ರುದ್ದೀನ್ ಕುಕ್ಕಾಜೆ ಬಾಸಿತ್ ತಂಳ್ ಉಪಾಧ್ಯಕ್ಷ ಫಾರೂಕ್ ದಾರಿಮಿ, ಅಝೀಝ್ ಮಲಿಕ್, ಆರಿಫ್ ಬಡಕಬೈಲ್, ವಿಖಾಯ ಕೇಂದ್ರ ಸಮಿತಿಯ ಸದಸ್ಯ ಮುಸ್ತಫಾ ಕಟ್ಪದಪಡ್ಪು, ಜಿಲ್ಲಾ ಅಧ್ಯಕ್ಷ ಇಬ್ರಾಹೀಂ ಕುಕ್ಕಟ್ಟೆ, ಕನ್ವೀನರ್ ಫಾರೂಕ್ ವಿಶಾಲ್ನಗರ, ಹಂಝ ಕುರಿಯ ಪ್ಪಾಡಿ, ರಿಯಾಝ್ ರಹ್ಮಾನಿ, ಖಾಸಿಂ ದಾರಿಮಿ, ನಿಸಾರ್ ಬೆಂಗ್ರೆ, ಶಾಕಿರ್ ಮಿತ್ತಬೈಲು, ಬದ್ರುದ್ದೀನ್ ಮರಕ್ಕಿಣಿ, ಶಾಫಿ ಪಡ್ಡಂದಡ್ಕ, ಇರ್ಫಾನ್ ಮೌಲವಿ, ಶಾಹುಲ್ ಸೂರಿಂಜೆ, ಅಶ್ರಫ್ ಫೈಝಿ ಮಲಾರ್, ಬಜಾಲ್ ಫೈಝಿ, ಎಂಎಸ್ ಮುಹಮ್ಮದ್, ವಲಯಾಧ್ಯಕ್ಷ ಅಶ್ರಫ್, ಪ್ರಧಾನ ಕಾರ್ಯದರ್ಶಿ ಉಮರ್ ದಾರಿಮಿ ಉಪಸ್ಥಿತರಿದ್ದರು.