ಜಮೀಯತೇ ಅಹ್ಲೇ ಹದೀಸ್ ಕರ್ನಾಟಕ-ಗೋವಾ ಘಟಕಕ್ಕೆ ಆಯ್ಕೆ

Update: 2024-09-26 15:26 GMT

ಮಂಗಳೂರು: ಜಮೀಯತೇ ಅಹ್ಲೇ ಹದೀಸ್ ಕರ್ನಾಟಕ-ಗೋವಾ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆಯು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ತ್ವಾಹಾ ಅಂಗ್ಲಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಅಶ್ಶೈಖ್ ಅಬ್ದುಲ್ ವಹಾಬ್ ಜಾಮಈ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಸ್ಲಂ ಖಾನ್, ಕೋಶಾಧಿಕಾರಿ ಮನ್ಸೂರ್ ಅಹ್ಮದ್ (ದಾದೂ) ಉಪಸ್ಥಿತರಿದ್ದರು.

ಸಮಿತಿಯ ಉಪಾಧ್ಯಕ್ಷರಾಗಿ ಮುಹಮ್ಮದ್ ಯೂನುಸ್ ಬಳ್ಳಾರಿ, ಶೇಖ್ ಶಾ ವಲಿಯುಲ್ಲಾಹ್ ಉಮ್ರಿ ಮೈಸೂರು, ಅಬ್ದುಲ್ ಸಲಾಂ ಕಾಟಿಪಳ್ಳ ಮಂಗಳೂರು, ಸಹ ಕಾರ್ಯದರ್ಶಿಗಳಾಗಿ ಅಬ್ದುರ‌್ರಝಾಕ್ ಜಾಮಈ ಹುಬ್ಬಳ್ಳಿ, ಮುಕ್ತಾರ್ ಅರಬ್ ಬಿಜಾಪುರ, ಇಸ್ಮಾಯೀಲ್ ಶಿವಮೊಗ್ಗ ಅವರನ್ನು ಆಯ್ಕೆ ಮಾಡಲಾಯಿತು.

ನ.9,10ರಂದು ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಆಲ್ ಇಂಡಿಯಾ ಅಹ್ಲೆ ಹದೀಸ್ ಸಮ್ಮೇಳನದ ಯಶಸ್ಸಿಗೆ ಜಮೀಯತೇ ಅಹ್ಲೇ ಹದೀಸ್ ಕರ್ನಾಟಕ-ಗೋವಾ ಘಟಕ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News