ಮುಸ್ಲಿಂ ಜಸ್ಟಿಸ್ ಫೋರಂ ಕರ್ನಾಟಕ ಸಂಘಟನೆಗೆ ಆಯ್ಕೆ

Update: 2024-09-26 17:00 GMT

ಇಕ್ಬಾಲ್ ಸಾಮಣಿಗೆ - ವಹಾಬ್ ಕುದ್ರೋಳಿ

ಮಂಗಳೂರು: ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ ಇದರ ವಾರ್ಷಿಕ ಸಭೆಯು ನಗರದ ಫಳ್ನೀರ್‌ನ ಲುಲು ಸೆಂಟರ್‌ನಲ್ಲಿ ಇರ್ಷಾದ್ ಯು.ಟಿ.ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಾಪಕಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ವಕ್ತಾರ ಹನೀಫ್ ಖಾನ್ ಕೊಡಾಜೆ ಉಪಸ್ಥಿತರಿದ್ದರು.

ಸಭೆಯಲ್ಲಿ ಆಂತರಿಕ ಮತದಾನದ ಮೂಲಕ ನೂತನ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಹಾಗು ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಮುಂದಿನ ಎರಡು ವರ್ಷದ ಅವಧಿಗೆ (2024-2026) ಅಧ್ಯಕ್ಷರಾಗಿ ಇಕ್ಬಾಲ್ ಸಾಮಣಿಗೆ, ಉಪಾಧ್ಯಕ್ಷರಾಗಿ ಮುಸ್ತಫಾ ಹರೇಕಳ ಮತ್ತು ಇದ್ದಿ ಕುನ್ನಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಹಾಬ್ ಕುದ್ರೋಳಿ ಆಯ್ಕೆ ಯಾದರು.

ಕಾರ್ಯದರ್ಶಿಯಾಗಿ ನವಾಝ್ ಉಳ್ಳಾಲ್, ಖಜಾಂಚಿಯಾಗಿ ಸಲಾಂ ಉಚ್ಚಿಲ್ ಮತ್ತು 9 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News