ಯುನಿವೆಫ್| ಉಳ್ಳಾಲ ಸೀರತ್ ಸಮಾವೇಶ ಪ್ರಯುಕ್ತ ಮಕ್ಕಳ ಪ್ರತಿಭಾ ಸ್ಪರ್ಧೆ

Update: 2024-10-12 18:31 GMT

ಮಂಗಳೂರು: ಯುನಿವೆಫ್ ಕರ್ನಾಟಕ 2024 ರ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ವರೆಗೆ "ಮಾನವ ಸ್ವಾತಂತ್ರ್ಯ, ಕಲ್ಯಾಣ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಉಳ್ಳಾಲ ಸೀರತ್ ಸಮಾವೇಶ ಪ್ರಯುಕ್ತ ಅ.20ರ ಬೆಳಿಗ್ಗೆ 9 ರಿಂದ ಮುಕ್ಕಚ್ಚೇರಿ ಬಿರ್ಲಾ ಕಂಪೌಂಡ್ ನಲ್ಲಿರುವ ನಿಮ್ರಾ ಮಸೀದಿ ವಠಾರದಲ್ಲಿ ಮಕ್ಕಳ ಪ್ರತಿಭಾ ಸ್ಪರ್ಧೆ ಜರಗಲಿರುವುದು.

ಜೂನಿಯರ್ ವಿಭಾಗದಲ್ಲಿ 7 ರಿಂದ 10 ವರ್ಷ ಪ್ರಾಯದ ಮಕ್ಕಳಿಗೆ ಮತ್ತು ಸೀನಿಯರ್ ವಿಭಾಗದಲ್ಲಿ 11 ರಿಂದ 14ವರ್ಷ ಪ್ರಾಯದ ಮಕ್ಕಳಿಗೆ ಕಿರ್ ಅತ್, ನಅತ್, ಭಾಷಣ ಮತ್ತು ಕ್ವಿಝ್ ಮುಂತಾದ ಸ್ಪರ್ಧೆಗಳು ನಡೆಯಲಿವೆ. ಉಳ್ಳಾಲ, ಕಲ್ಲಾಪು ಮತ್ತು ಕುಂಪಲ ಪರಿಸರದ ಆಸಕ್ತ ಮಕ್ಕಳು ಭಾಗವಹಿಸಬಹುದು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗು ವುದು. ಮಕ್ಕಳ ಹೆಸರು, ವಯಸ್ಸು ಹಾಗೂ ಭಾಗವಹಿಸುವ ಸ್ಪರ್ಧೆಯ ವಿವರಗಳನ್ನು 8618499639 ಅಥವಾ 9945913824 ಸಂಖ್ಯೆಗೆ ವಾಟ್ಸಪ್ ಮೂಲಕ ಕಳಿಸಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News