ಉಳ್ಳಾಲ: ಯುನಿವೆಫ್ ನಿಂದ ಸೀರತ್ ಸಮಾವೇಶ ಪ್ರಯುಕ್ತ ಮಕ್ಕಳ ಪ್ರತಿಭಾ ಸ್ಪರ್ಧೆ

Update: 2024-10-13 09:22 GMT

ಉಳ್ಳಾಲ: ಯುನಿವೆಫ್ ಕರ್ನಾಟಕ ಸೆ.20ರಿಂದ ಡಿಸೆಂಬರ್ 20ರ ವರೆಗೆ ಮಾನವ 'ಸ್ವಾತಂತ್ರ್ಯ, ಕಲ್ಯಾಣ ಮತ್ತು ಪ್ರವಾದಿ ಮುಹಮ್ಮದ್(ಸ.)' ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಉಳ್ಳಾಲ ಸೀರತ್ ಸಮಾವೇಶ ಪ್ರಯುಕ್ತ ಅಕ್ಟೋಬರ್ 20ರಂದು ಬೆಳಗ್ಗೆ 9ರಿಂದ ಮುಕ್ಕಚ್ಚೇರಿ ಬಿರ್ಲಾ ಕಂಪೌಂಡ್ ನಲ್ಲಿರುವ ನಿಮ್ರಾ ಮಸೀದಿ ವಠಾರದಲ್ಲಿ ಮಕ್ಕಳ ಪ್ರತಿಭಾ ಸ್ಪರ್ಧೆ ಜರಗಲಿದೆ.

ಜೂನಿಯರ್ ವಿಭಾಗದಲ್ಲಿ 7ರಿಂದ 10 ವರ್ಷ ಪ್ರಾಯದ ಮಕ್ಕಳಿಗೆ ಮತ್ತು ಸೀನಿಯರ್ ವಿಭಾಗದಲ್ಲಿ 11ರಿಂದ 14 ವರ್ಷ ಪ್ರಾಯದ ಮಕ್ಕಳಿಗೆ ಕಿರಾಅತ್, ನಅತ್, ಭಾಷಣ ಮತ್ತು ಕ್ವಿಝ್ ಮುಂತಾದ ಸ್ಪರ್ಧೆಗಳು ನಡೆಯಲಿವೆ. ಉಳ್ಳಾಲ, ಕಲ್ಲಾಪು ಮತ್ತು ಕುಂಪಲ ಪರಿಸರದ ಆಸಕ್ತ ಮಕ್ಕಳು ಭಾಗವಹಿಸಬಹುದು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಮಕ್ಕಳ ಹೆಸರು, ವಯಸ್ಸು ಹಾಗೂ ಭಾಗವಹಿಸುವ ಸ್ಪರ್ಧೆಯ ವಿವರಗಳನ್ನು ಮೊ.ಸಂ.: 8618499639 ಅಥವಾ 9945913824 ಸಂಖ್ಯೆಗೆ ವಾಟ್ಸ್ ಆ್ಯಪ್ ಮೂಲಕ ಕಳುಹಿಸಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News