ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ಪ್ರವೀಣ್ ರೋಡ್ರಿಗಸ್ ನಾಮ ನಿರ್ದೇಶನ

Update: 2024-09-15 09:01 GMT

ಬಂಟ್ವಾಳ : ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧಿಕಾರೇತರ ಸದಸ್ಯರಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೋಡ್ರಿಗಸ್ ಕಾವಳಪಡೂರು ನಾಮ ನಿರ್ದೇಶನ ಗೊಂಡಿದ್ದಾರೆ.

ಉಳಿದಂತೆ ಮುಹಮ್ಮದ್ ರಿಯಾಝ್ ನೆಹರೂ ನಗರ, ವೆಂಕಪ್ಪ ಪೂಜಾರಿ ಅರ್ಬಿಗುಡ್ಡೆ, ಅಶೋಕ್ ಭಂಡಾರಿಬೆಟ್ಟು, ರೇಶ್ಮ ತೇಲೀಸ್ ಬೋಳಂಗಡಿ, ಪುರುಷೋತ್ತಮ ಬಂಗೇರ ಮಂಡಾಡಿ, ರವೀಂದ್ರ ಸಪಲ್ಯ ಬೋಳಂತೂರು, ಹಾಗೂ ಶಿವಾನಂದ ನಾಯ್ಕ ಕೊಳ್ನಾಡು ಅವರನ್ನು ರಾಜ್ಯಪಾಲರ ಆಜ್ಞಾನುಸಾರ ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಯವರು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News