ಇಂದ್ರಧನುಷ್ ಯಶಸ್ಸಿಗೆ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ

Update: 2023-08-06 16:43 GMT

ಮಂಗಳೂರು, ಆ.6: ದ.ಕ.ಜಿಲ್ಲೆಯಲ್ಲಿ ಮೊದಲ ಹಂತದ ಇಂದ್ರ ಧನುಷ್ ಕಾರ್ಯಕ್ರಮವು ಆ.7ರಿಂದ 12ರವರೆಗೆ, ಎರಡನೇ ಹಂತದ ಕಾರ್ಯಕ್ರಮವು ಸೆ.11ರಿಂದ 16ರವರೆಗೆ ಹಾಗೂ ಮೂರನೇ ಹಂತದ ಕಾರ್ಯಕ್ರಮವು ಅ. 9ರಿಂದ 14ರವರೆಗೆ ನಡೆಯಲಿದೆ.

ಲಸಿಕೆ ವಂಚಿತ 0-2 ವರ್ಷ ಪ್ರಾಯದ ಮಕ್ಕಳು, ಗರ್ಭಿಣಿ ಸ್ತ್ರೀಯರು ಈ ಸಂದರ್ಭ ಲಸಿಕೆ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲಾ ಮಸೀದಿಗಳ ಆಡಳಿತ ಮಂಡಳಿಯವರು ತಮ್ಮ ಮೊಹಲ್ಲಾಗಳಲ್ಲಿ ಜಾಗೃತಿ ಮೂಡಿಸಬೇಕೆಂದು ದ.ಕ.ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News