ರಸ್ತೆ ಅಪಘಾತ: ಗಾಯಾಳು ವೃದ್ಧ ಮೃತ್ಯು

Update: 2024-09-08 16:17 GMT

ಮಂಗಳೂರು, ಸೆ.8: ಆಟೊ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ವೃದ್ಧರೊಬ್ಬರು ಮೃತಪಟ್ಟ ಘಟನೆ ನಗರದ ಶಿವಭಾಗ್‌ನಲ್ಲಿ ನಡೆದಿದೆ.

ಎಕ್ಕೂರು ನಿವಾಸಿ ಗುರುಪ್ರಸಾದ್ (71) ಮೃತಪಟ್ಟವರು.

ಇವರು ಸೆ.5ರಂದು ಕದ್ರಿ ಶಿವಭಾಗ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ಆಟೊರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮೃತಪಟ್ಟಿರುವುದಾಗಿ‌ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News