ಉಪ್ಪಿನಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Update: 2023-08-16 16:28 GMT

ಉಪ್ಪಿನಂಗಡಿ: ಉದನೆ ಸಮೀಪದ ಕಡೆಂಬಿಲ ಎಂಬಲ್ಲಿ ನಾಪತ್ತೆಯಾಗಿದ್ದ ರೆಖ್ಯಾ ಗ್ರಾಮ ನಿವಾಸಿ ಲೋಕೇಶ್ (43) ಎಂಬವರ ಮೃತ ದೇಹ ಗುಂಡ್ಯ ಹೊಳೆಯಲ್ಲಿ ಬುಧವಾರದಂದು ಪತ್ತೆಯಾಗಿದೆ.

ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಊರ್ನಡ್ಕ ಮನೆ ನಿವಾಸಿಯಾಗಿರುವ ಲೋಕೇಶ್ ಮನೆಗೆ ಅಗತ್ಯ ಸಾಮಾನು ತರುತ್ತೇನೆಂದು ಸೋಮವಾರ ಸಾಯಂಕಾಲ ಬೈಕಿನಲ್ಲಿ ಮನೆಯಿಂದ ಹೋದವರು ಉದನೆ ಪೇಟೆಗೆ ಹೋಗಿ ಕಡೆಂಬಿಲ ಎಂಬಲ್ಲಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದರು. ರಾತ್ರಿಯಾದರೂ ಲೋಕೇಶ್ ಮನೆಗೆ ಬಾರದೇ ಇದ್ದ ಕಾರಣಕ್ಕೆ ಕಡೆಂಬಿಲ ಎಂಬಲ್ಲಿನ ನದಿ ಪರಿಸರದಲ್ಲಿ ಅಗ್ನಿಶಾಮಕ ದಳ ಹಾಗೂ ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಹುಡುಕಾಟದ ಕಾರ್ಯಾಚರಣೆ ನಡೆಸಿದ್ದು, ಮಧ್ಯಾಹ್ನದ ವೇಳೆ ಗುಂಡ್ಯ ಹೊಳೆಯಲ್ಲಿ ಅವರ ಶವ ಪತ್ತೆಯಾಗಿದೆ.

ಮೃತ ಲೋಕೇಶ್ ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಉಪ್ಪಿನಂಗಡಿ ಪೊಲೀಸರು ದಾಖಲಿಸಿಕೊಂಡಿದ್ದ ನಾಪತ್ತೆ ಪ್ರಕರಣವನ್ನು ಅಸ್ವಾಭಾವಿಕ ಸಾವು ಪ್ರಕರಣವಾಗಿ ಪರಿವರ್ತಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News