ಉಪ್ಪಿನಂಗಡಿ: ವಿಶ್ವ ಜಾಂಬೂರಿಗೆ ಕರ್ವೇಲಿನ ಸೈಫುದ್ದೀನ್ ಆಯ್ಕೆ

Update: 2023-07-22 17:40 GMT

ಉಪ್ಪಿನಂಗಡಿ: ದಕ್ಷಿಣ ಕೊರಿಯದ ಸಮೇಗಂನಲ್ಲಿ ನಡೆಯಲಿರುವ 25ನೇ ವಲ್ಡ್  ಸ್ಕೌಟ್ಸ್ ಜಾಂಬೂರಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಐಎಸ್‍ಟಿ ಪ್ರತಿನಿಧಿಯಾಗಿ ಕರುವೇಲಿನ ಸೈಫುದ್ದೀನ್ ಆಯ್ಕೆಯಾಗಿದ್ದಾರೆ.

ಕರುವೇಲಿನ ಅಬ್ದುಲ್ ಖಾದರ್ ಹಾಜಿ ಮತ್ತು ಸಲೀಕತ್ ಬೀಬಿ ದಂಪತಿಯ ಪುತ್ರನಾದ ಇವರು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಬಿಎ ವಿದ್ಯಾರ್ಥಿಯಾಗಿದ್ದು, ಕರುವೇಲು ಕುವ್ವತುಲ್ ಇಸ್ಲಾಂ ಮದ್ರಸ ಹಳೆ ವಿದ್ಯಾರ್ಥಿಯಾಗಿದ್ದಾರೆ. ಝಿಕ್ರ್ ಹಲ್ಖಾ ಕಮಿಟಿಯ ಜೊತೆ ಕಾರ್ಯದರ್ಶಿಯಾಗಿದ್ದಾರೆ. ವಿಶ್ವ ಜಾಂಬೂರಿಯು ಮುಂಬರುವ ಆ.1ರಿಂದ 12ರವರೆಗೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News