ದಿಲ್ಲಿ | ಫುಡ್ ಡೆಲಿವರಿ ಬಾಯ್ ನನ್ನು ಇರಿದು ಕೊಂದ ಯುವಕ

Update: 2024-10-11 13:34 GMT

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ: ಪರಸ್ಪರ ಪರಿಚಯವಿರುವ ಗೆಳತಿಯೊಬ್ಬಳ ಕುರಿತಂತೆ ವಾಗ್ವಾದ ನಡೆದು, 28 ವರ್ಷದ ಫುಡ್ ಡೆಲಿವರಿ ಬಾಯ್ ನನ್ನು ಯುವಕನೊಬ್ಬ ಇರಿದು ಕೊಂದಿರುವ ಘಟನೆ ದಿಲ್ಲಿಯ ರೋಹಿಣಿಯಲ್ಲಿ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಮಂಗಳವಾರ ವಿಜಯ್ ವಿಹಾರ್ ಪ್ರದೇಶದಲ್ಲಿ ನಡೆದಿದ್ದು, 19 ವರ್ಷದ ನಿಖಿಲ್ ತೋಮರ್ ಎಂಬ ಯುವಕನು ದೀಪಕ್ ಎಂಬ ವ್ಯಕ್ತಿಗೆ ಹಲವಾರು ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಅವರು ಹೇಳಿದ್ದಾರೆ.

ಕಳೆದ ವಾರ ಮಹಿಳೆಯೊಬ್ಬಳ ಕುರಿತು ಇಬ್ಬರ ನಡುವೆ ವಾಗ್ವಾದ ನಡೆದು, ಅದು ಅತಿರೇಕಕ್ಕೆ ತಲುಪಿತ್ತು ಎಂದು ಅವರು ತಿಳಿಸಿದ್ದಾರೆ.

“ಮೃತ ವ್ಯಕ್ತಿ ಹಾಗೂ ಆರೋಪಿ ಇಬ್ಬರಿಗೂ ಅಪರಾಧದ ಹಿನ್ನೆಲೆಯಿದೆ” ಎಂದು ರೋಹಿಣಿಯ ಉಪ ಪೊಲೀಸ್ ಆಯುಕ್ತ ಅಮಿತ್ ಗೋಯಲ್ ಹೇಳಿದ್ದಾರೆ.

ಆರೋಪಿ ತೋಮರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ತಲೆಮರೆಸಿಕೊಂಡಿರುವ ತನ್ನ ಸಹಚರರ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ ಎಂದೂ ಅವರು ತಿಳಿಸಿದ್ದಾರೆ.

ಪರಸ್ಪರರಿಗೆ ಪರಿಚಯವಿದ್ದ ಮಹಿಳೆಯ ಕಾರಣಕ್ಕೆ ನಮ್ಮಿಬ್ಬರ ನಡುವೆ ದ್ವೇಷ ಬೆಳೆಯಿತು ಎಂದೂ ತೋಮರ್ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ತಲೆಮರೆಸಿಕೊಂಡಿರುವ ಇನ್ನಿತರ ಆರೋಪಿಗಳನ್ನು ಸೆರೆ ಹಿಡಿಯುವ ಪ್ರಯತ್ನ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News