ಕೇರಳ: ಕಾಡು ಹಂದಿಗಳಿಗಾಗಿ ಇಟ್ಟಿದ್ದ ವಿದ್ಯುತ್ ಬಲೆ ತುಳಿದು ಇಬ್ಬರು ಯುವಕರು ಮೃತ್ಯು

Update: 2023-09-27 18:17 GMT

Photocredit: newsable.asianetnews.com

ಪಾಲಕ್ಕಾಡ್: ಕಾಡು ಹಂದಿಗಳಿಗಾಗಿ ಇಟ್ಟಿದ್ದ ವಿದ್ಯುತ್ ಬಲೆಯನ್ನು ತುಳಿದು ಇಬ್ಬರು ಯುವಕರು ಮೃತಪಟ್ಟಿದ್ದು, ಇದರಿಂದ ಆತಂಕಗೊಂಡಿರುವ ಜಮೀನಿನ ಮಾಲಕ, ಆ ಯುವಕರ ದೇಹಗಳನ್ನು ತನ್ನ ಜಮೀನಿನಲ್ಲೇ ಹೂತ ಘಟನೆ ನಡೆದಿದೆ ಎಂದು onmanorama.com ವರದಿ ಮಾಡಿದೆ.

ಮಂಗಳವಾರ ಕೊಡುಂಬುವಿನ ಅಂಬಲಪರಂಬು ಗ್ರಾಮದ ಪಲ್ನೀರಿ ಕಾಲನಿಯಲ್ಲಿ ಇಬ್ಬರು ಯುವಕರ ದೇಹದ ಭಾಗಗಳು ಜಮೀನೊಂದರಲ್ಲಿ ಪತ್ತೆಯಾಗಿದ್ದವು. ಈ ಕುರಿತು ಜಮೀನಿನ ಮಾಲಕನನ್ನು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿರುವ ಆತ, ಗಾಬರಿಯಿಂದ ತಾನು ಹಾಗೆ ಮಾಡಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಮೃತ ಯುವಕರ ದೇಹಗಳು ಪತ್ತೆಯಾದ ಜಮೀನಿನ ಮಾಲಕ ಅಂಬಲಪರಂಬು ವೀಟ್ಟಿಲ್ ಅನಂತನ್ (52) ಇದೀಗ ಪೊಲೀಸರ ವಶದಲ್ಲಿದ್ದಾನೆ. ಆ ಯುವಕರ ಸಾವಿಗೆ ಮತ್ತೇನಾದರೂ ಕಾರಣವಿತ್ತೆ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News