ಬಂದೂಕಿನಲ್ಲಿ ಆಟ ಆಡುತ್ತಿದ್ದ ಮಕ್ಕಳು: ದೊಡ್ಡವನು ಸಣ್ಣವನಿಗೆ ಗುಂಡಿಟ್ಟು ಕೊಂದ!

Update: 2016-05-16 11:41 GMT

ಹೊಸದಿಲ್ಲಿ, ಮೇ 16: ಮಹಾರಾಷ್ಟ್ರದ ರೈತನೊಬ್ಬನಮೇಲೆ ದುಃಖದ ಪರ್ವತ್ತವೇ ಬಿದ್ದು ಹೋಗಿತ್ತು. ಅವನ ಹತ್ತುವರ್ಷದ ಪುತ್ರನನ್ನು ದೊಡ್ಡ ಮಗ ಗುಂಡು ಹಾರಿಸಿಕೊಂದು ಹಾಕಿದ್ದ. ಅವನ ಇಬ್ಬರು ಮಕ್ಕಳು ತಂದೆಯ ಗೆಳೆಯನ ಬಂದೂಕಿನಲ್ಲಿ ಆಟ ಆಡುತ್ತಿದ್ದರು.ಆಡುತ್ತಾ ಆಡುತ್ತಾ ತಮ್ಮನಿಗೆ ಅಣ್ಣ ಗುಂಡು ಹಾರಿಸಿದ್ದಾನೆ.ಪರಿಣಾಮವಾಗಿ ತಮ್ಮ ಗುಂಡೇಟು ತಿಂದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪುಣೆಗೆ ಐವತ್ತು ಕಿ.ಮೀ. ದೂರದಲ್ಲಿರುವ ಗೋರಾಡ್ ವಾಡಿಯಿಂದ ವರದಿಯಾಗಿದೆ.

ಮೃತಬಾಲಕ ದೀಪಕ್‌ನ ತಂದೆ ವಿಠ್ಠಲ ಮರ್ಗಲೆ ಈ ಬಂದೂಕನ್ನುತನ್ನ ಗೆಳೆಯ ರಮೇಶ ಪಸಾಲ್‌ಕರ್‌ನಿಂದ ತಂದಿದ್ದ. ರಮೇಶ್ ಲೈಸೆನ್ಸ್ ಹೊಂದಿರುವ ಬಂದೂಕು ಇದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಬಂದೂಕು ತಂದ ಮರುದಿವಸ ವಿಠ್ಠಲ್‌ರು ತನ್ನ ಪತ್ನಿಯೊಂದಿಗೆಹೊಲದಲ್ಲಿ ಕೆಲಸ ಮಾಡಲು ಹೋಗಿದ್ದರು. ಮನೆಯಲ್ಲಿ ಮಕ್ಕಳು ಮತ್ತು ಮಕ್ಕಳ ಅಜ್ಜ ಅಜ್ಜಿ ಮಾತ್ರ ಇದ್ದರು ಎಂದು ಪೊಲೀಸರು ತಿಳಿದು ಕೊಂಡಿದ್ದಾರೆ.

ಅಜ್ಜಅಜ್ಜಿ ಹೊರಗೆ ಕೂತಿದ್ದರು. ಆಗ ಇಬ್ಬರು ಸಹೋದರರು ಬಂದೂಕನ್ನು ನೋಡುವ ಆಸೆಯಲ್ಲಿ ಪೆಟ್ಟಿಗೆಯನ್ನು ತೆರೆದು ಬಂದೂಕಿನ್ನು ತೆಗೆದು ಗುಂಡು ತುಂಬಿದ್ದರು. ನಂತರ ದೊಡ್ಡವನು ಗುಂಡು ಹಾರಿಸಿದ ಅದು ಅವನ ತಮ್ಮ ನಿಗೆ ಹೋಗಿ ಬಿದ್ದಿತ್ತು. ಹತ್ತುವರ್ಷದ ದೀಪಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಅಲ್ಲಿ ವೈದ್ಯರು ಬಾಲಕ ಮೃತನಾಗಿದ್ದಾನೆಎಂದು ಘೋಷಿಸಿದ್ದರು.

ಪೊಲೀಸರು ಬಂದೂಕು ನೀಡಿದ ಪಸಾಲ್‌ಕರ್‌ನ ಮನೆ ತಪಾಸಣೆ ಮಾಡಿದಾಗ ಅಲ್ಲಿ ಇನ್ನೊಂದು ಬಂದೂಕು ಪತ್ತೆಯಾಗಿತ್ತು. ಇದು ತನ್ನ ಗೆಳೆಯ ಶಿವಾಜಿಯಿಂದ ತಂದಿದ್ದೇನೆ ಎಂದು ಪಸಾಲ್‌ಕರ್ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಬಂದೂಕು ನೀಡಿದ ರಮೇಶ್ ಪಸಾಲ್‌ಕರ್ ಮತ್ತು ಶಿವಾಜಿಯನ್ನು ಬಂಧಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News