ಉಮಾಭಾರತಿ ನಿವಾಸದಲ್ಲಿ ಹೆಡ್ಕಾನ್ಸ್ಟೇಬಲ್ ಆತ್ಮಹತ್ಯೆ ಯತ್ನ
ಹೊಸದಿಲ್ಲಿ, ಮೇ 16: ಕೇಂದ್ರ ಸಚಿವೆ ಉಮಾಭಾರತಿ ಯವರ ನಿವಾಸದಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಟಟ್ಟಿದ್ದ ದಿಲ್ಲಿ ಪೊಲೀಸ್ನ ಹೆಡ್ಕಾನ್ಸ್ಟೇಬಲ್ ಒಬ್ಬ ರವಿವಾರ ರಾತ್ರಿ ತನ್ನ ಸರ್ವೀಸ್ ಗನ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ರಾತ್ರಿ 10:30ರ ವೇಳೆ ಈ ಘಟನೆ ನಡೆದಿದ್ದು, ಕೂಡಲೇ ಪೊಲೀಸ್ ತಂಡಗಳನ್ನು ಉಮಾಭಾರತಿ ಯವರ ನಿವಾಸಕ್ಕೆ ಕಳುಹಿಸಲಾಯಿತು.
ದಿಲ್ಲಿ ಪೊಲೀಸ್ನ ಭದ್ರತಾ ಘಟಕದ ಹೆಡ್ಕಾನ್ಸ್ಟೇಬಲ್ ಬ್ರಿಜ್ಪಾಲ್ ಎಂದು ಗುರುತಿಸಲಾಗಿರುವ ಅಧಿಕಾರಿ, ಹತ್ತಿರದ ಆಸ್ಪತ್ರೆಗೆ ಒಯ್ದವೇಳೆ ಉಸಿರಾಡು ತ್ತಿದ್ದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಅವರ ಆತ್ಮಹತ್ಯೆ ಯತ್ನದ ಕಾರಣ ಇದುವರೆಗೆ ತಿಳಿದುಬಂದಿಲ್ಲ ಎಂದಿದ್ದಾರೆ.
ಸ್ಥಳದಲ್ಲಿ ಪತ್ತೆಯಾಗಿದ್ದ, ತನ್ನ ಅಧಿಕೃತ ಬಂದೂಕಿನಿಂದಲೇ ಬ್ರಿಜ್ಪಾಲ್ ಗುಂಡು ಹಾರಿಸಿ ಕೊಂಡಿದ್ದಾರೆಂದು ಅಭಿಪ್ರಾಯಿಸಲಾಗಿದೆ. ಅವರ ಸ್ಥಿತಿ ಗಂಭೀರವಿದೆಯೆಂದು ಹೊಸದಿಲ್ಲಿಯ ಡಿಸಿಪಿ ಜತಿನ್ ನರ್ವಾಲ್ ತಿಳಿಸಿದ್ದಾರೆ.