ನಾವೇ ಗೆದ್ದೆವು - ಕರುಣಾ ನಿಧಿ : ಎರಡು ದಿವಸ ಕಾಯಿರಿ - ಜಯಲಲಿತಾ!

Update: 2016-05-17 10:18 GMT

ಚೆನ್ನೈ, ಮೇ 17: ಎಕ್ಸಿಟ್ ಪೋಲ್ ಫಲಿತಾಂಶ ಏನೆ ಇರಲಿ ಡಿಎಂಕೆ- ಕಾಂಗ್ರೆಸ್ ಸಖ್ಯ ತಮಿಳ್ನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಡಿಎಂಕೆ ಅಧ್ಯಕ್ಷ ಕರಣಾನಿಧಿ ಹೇಳಿಯೇ ಬಿಟ್ಟಿದ್ದಾರೆ. ಗೋಪಾಲಪುರದ ತನ್ನಮನೆ ಪಕ್ಕದ ಶ್ರೀಶಾರದ ಹೈಯರ್ ಸೆಕಂಡರಿ ಶಾಲೆಯಲ್ಲಿ ನಿನ್ನೆ ವೋಟು ಚಲಾಯಿಸಿದ ನಂತರ ಹೀಗೆ ಹೇಳಿದ್ದಾರೆ. ಅದೇ ವೇಳೆ ತಮಿಳು ಜನತೆಯ ತೀರ್ಮಾನಕ್ಕೆ ಎರಡು ದಿವಸ ಕಾಯಬೇಕೆಂದು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ. ಅವರು ನಿನ್ನೆ ಚೆನ್ನೈ ಕ್ಯಾಥೆಡ್ರಲ್ ರಸ್ತೆಯ ಸ್ಟೆಲ್ಲ ಮೆರೀಸ್ ಕಾಲೇಜ್‌ನಲ್ಲಿ ವೋಟು ಹಾಕಿದ ನಂತರ ಹೀಗೆ ಹೇಳಿದ್ದರು. ಇತರ ಪಕ್ಷಗಳು ಜನರ ತಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದು ಇತರ ಪಕ್ಷಗಳೂ ಹೇಳಿಕೊಂಡಿವೆ.

ಹಣ ವಿತರಣೆ ಪತ್ತೆಯಾದ ಅರವಾಕ್ಕುರಿಚ್ಚಿ, ತಂಜಾವೂರ್ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಯನ್ನು ಮುಂದೂಡಲಾಗಿದ್ದು ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಡಿಎಂಕೆಯ ಸ್ಟಾಲಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News