ದಿಲ್ಲಿಯಲ್ಲಿ ವಿದ್ಯಾರ್ಥಿನಿಯನ್ನು ವಿವಸ್ತ್ರ ಗೊಳಿಸಲು ಯತ್ನಿಸಿದ ಬದ್ಮಾಶ್‌ಗಳು!

Update: 2016-05-18 09:34 GMT

ಹೊಸದಿಲ್ಲಿ, ಮೇ 18: ಅಂಗಡಿಯೊಂದಕ್ಕೆ ತೆರಳಿದ್ದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿಯ ಬಟ್ಟೆ ಹರಿದು ಎಲ್ಲರ ಮುಂದೆ ವಿವಸ್ತ್ರಗೊಳಿಸಲು ಯತ್ನಿಸಿದ ಘಟನೆ ಸೆಂಟ್ರಲ್ ದಿಲ್ಲಿಯ ಆನಂದ್ ಪರ್ವತ್ ಎಂಬಲ್ಲಿಂದ ವರದಿಯಾಗಿದೆ. ಅವಳ ರಕ್ಷಣೆಗೆ ಬಂದ ಅವಳ ತಾಯಿಮತ್ತು ಸಹೋದರಿಯನ್ನು ಕೋಡಾ ದುಷ್ಕರ್ಮಿಗಳು ಹೀನಾಯವಾಗಿ ಹೊಡೆದಿದ್ದಾರೆ. ವಿದ್ಯಾರ್ಥಿನಿ, ಅವಳ ತಾಯಿ ಮತ್ತು ಸಹೋದರಿಗೆ ಹೊಡೆಯುತ್ತಿರುವ ದೃಶ್ಯಗಳು ಸುತ್ತಮುತ್ತಲಿನ ಸಿಸಿಟಿವಿಯಲ್ಲಿಯೂ ದಾಖಲಾಗಿದೆ.

 ವರದಿಯಾಗಿರುವ ಪ್ರಕಾರ ರಾತ್ರಿ ಒಂಬತ್ತು ಗಂಟೆಗೆ ಅಂಗಡಿಯೊಂದಕ್ಕೆ ಬಂದಿದ್ದ ವಿದ್ಯಾರ್ಥಿನಿಯನ್ನು ನೆರೆಯವರಾದ ಸೋನೂ. ಗೋವಿಂದ ಮತ್ತು ಚುನ್ನು ಅವಳನ್ನು ರಸ್ತೆಯ ಮಧ್ಯೆ ತಡೆದು ಚುಡಾಯಿಸತೊಡಗಿದ್ದರು. ಇದನ್ನು ವಿರೋಧಿಸಿ ಅವರಲ್ಲೊಬ್ಬನಿಗೆ ಹೊಡೆದಿದ್ದಾಳೆ. ಇದರಿಂದ ಕೋಪಗೊಂಡ ಅವರು ಹುಡುಗಿಯ ಬಟ್ಟೆ ಹರಿದಿದ್ದಲ್ಲದೆ ಬೆಲ್ಟಿನಿಂದ ಹೊಡೆದಿದ್ದರು. ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿಯ ದೂರಿನಂತೆ ಪೊಲೀಸರು ಮೂವರು ಆರೋಪಿಗಳನ್ನು ಹುಡುಕುತ್ತಿದ್ದಾರೆಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News