ಅಮಿತಾಭ್‌ನ್ನು ಪುನಃ ಟೀಕಿಸಿದ ಅಮರ್‌ಸಿಂಗ್! : ಅಮರ್‌ಸಿಂಗ್‌ರ ಬಗ್ಗೆ ಅಪಸ್ವರವೆತ್ತಿದ ಆಝಂ ಖಾನ್!

Update: 2016-05-19 06:08 GMT

 ಹೊಸದಿಲ್ಲಿ, ಮೇ 19: ರಾಜ್ಯಸಭೆ ಚುನಾವಣೆಗೆ ಸಮಾಜವಾದಿ ಪಕ್ಷದಿಂದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಅಮರ್‌ಸಿಂಗ್ ತನ್ನ ಹಳೆಯ ಗೆಳೆಯ ಅಮಿತಾಭ್ ಬಚ್ಚನ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಅಮಿತಾಭ್ ಅಪರಾಧ ಆರೋಪದಲ್ಲಿ ಮುಳುಗೇಳುತ್ತಿರುವಂತಹ ನಟನಾಗಿದ್ದಾರೆ ಹಾಗೂ ಪನಾಮಾ ಪೇಪರ್ಸ್‌ನಲ್ಲಿ ಅವರ ಹೆಸರು ಬಹಿರಂಗವಾಗಿದೆ ಎಂದು ಹೇಳಿದ್ದಾರೆ.

 "ನಾನು ಅಮಿತಾಭ್ ಬಚ್ಚನ್‌ಗಾಗಿ ಪ್ರಾರ್ಥಿಸುತ್ತೇನೆ. ಅವರು ಪನಾಮಾ ಪೇಪರ್ಸ್‌ನಲ್ಲಿ ಕೂಡಾ ಸಿಲುಕಿಬಿಟ್ಟಿದ್ದಾರೆ. ತನ್ನ ಹೆಸರು ದುರುಪಯೋಗಗೊಂಡಿರುವುದು ಅವರಿಗೆ ಗೊತ್ತಿಲ್ಲ." ಎಂದ ಅಮರ್‌ಸಿಂಗ್ " ಸವೋರ್ವ ನ್ಯಾಯಾಲಯದಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಬಳಿಕ ಸಿಬಿಐ ತನಿಖೆ ನಡೆಯುತ್ತಿದೆ. ಕಪ್ಪು ಹಣದ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ. ಕತೆ ಇಲ್ಲಿಗೆ ಮುಗಿಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವ ಅರುಣ್‌ ಜೇಟ್ಲಿಯವರು ನೇಮಕಗೊಳಿಸಿರುವ ಎಸ್‌ಐಟಿ ಕೂಡಾ ತನಿಖೆ ನಡೆಸುತ್ತಿದೆ. ಅವರಿಗೆ ಅಸಹನೀಯ ಆಘಾತವನ್ನು ತಡೆಯುವ ಶಕ್ತಿ ಕೊಡು ಎಂದು ನಾನು ದೇವನಲ್ಲಿ ಪ್ರಾರ್ಥಿಸುವೆ" ಎಂದು ವ್ಯಂಗ್ಯೋಕ್ತಿಗಳನ್ನು ಸಿಡಿಸಿದ್ದಾರೆ.

ಈ ನಡುವೆ ಅಮರ್ ಸಿಂಗ್‌ರ ಪ್ರತಿಸ್ಪರ್ಧಿ ಎನ್ನಲಾಗುವ ಆಝಂಖಾನ್ ಅವರನ್ನು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿ"ದುಃಖಕರ" ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಆಗಿರುವ ಖಾನ್ " ನನ್ನ ವೈಯಕ್ತಿಯ ಅಭಿಪ್ರಾಯವನ್ನು ಹೇಳುವುದಿದ್ದರೆ ಇದೊಂದು ದುಃಖಕರ ಪ್ರಸಂಗವಾಗಿದೆ. ಆದರೆ ಮುಲಾಯಂ ಪಕ್ಷದ ಪ್ರಮುಖ ಆಗಿದ್ದಾರೆ. ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದ್ದರಿಂದ ಈ ವಿಚಾರದಲ್ಲಿ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News