ತನ್ನನ್ನು ಸೋಲಿಸಲು ಷಡ್ಯಂತ್ರ ನಡೆಸಲಾಗಿತ್ತು: ಕೆ.ಎಂ. ಮಾಣಿ

Update: 2016-05-22 10:34 GMT

ಕೋಟ್ಟಯಂ, ಮೇ 22: ಪಾಲ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಬಹುಮತದಿಂದ ಗೆದ್ದಿರುವ ಕೇರಳ ಕಾಂಗ್ರೆಸ್‌ನ ಹಿರಿಯ ನಾಯಕ ಕೆಎಂ ಮಾಣಿ ತನ್ನನ್ನು ಸೋಲಿಸಲು ಭಾರೀ ಷಡ್ಯಂತ್ರ ನಡೆದಿತ್ತು ಎಂದು ಹೇಳಿದ್ದಾರೆ. ಕೇರಳ ಕಾಂಗ್ರೆಸ್ ತೊರೆದು ಹೋದವರನ್ನು ಮಾಣಿ ಪಕ್ಷಕ್ಕೆ ಮರಳಿ ಸ್ವಾಗತಿಸಿದ್ದಾರೆ. ಒಂದು ಆವೇಶದಲ್ಲಿ ಪಕ್ಷತೊರೆದವರು ಪಶ್ಚಾತ್ತಾಪಪಟ್ಟು ಮರಳಿ ಬರುವುದಿದ್ದರೆ ಸ್ವಾಗತ ಇದೆ ಎಂದು ಮಾಣಿ ತಿಳಿಸಿದ್ದಾರೆ. ತನ್ನ ವಿರುದ್ಧ ಗೂಢಾಲೋಚನೆ ನಡೆಸಿದವರು ಯಾರೆಂದು ತಿಳಿದಿದೆ. ಆದರೆ ಅವರುಯಾರೆಂದು ಬಹಿರಂಗಪಡಿಸುವುದಿಲ್ಲ. ನನ್ನ ರಕ್ತಕ್ಕೆ ಆಶೆಪಟ್ಟವರದ್ದೂ ಗೊತ್ತಿದೆ. ಮಾನಹಾನಿ ನಡೆಸಲು ಹೀಗೆ ಹಲವು ವಿಧದಲ್ಲಿ ಅವರುಪ್ರಯತ್ನಿಸಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾಗಿಲ್ಲ. ಅವರ ಅಮಿತ ಆತ್ಮವಿಶ್ವಾಸ ಅವರಿಗೇ ಮುಳುವಾಯಿತೆಂದು ಮಾಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಯುಡಿಎಫ್‌ನ ಮತಗಳಲ್ಲಿ ಭಾರೀ ಸೋರಿಕೆಯಾಗಿದೆ. ಕೇರಳ ಕಾಂಗ್ರೆಸ್ ಯುಡಿಎಫ್‌ನ ಭಾಗವಾಗಿಯೇ ಮುಂದುವರಿಯಲಿದೆ. ಉಮ್ಮನ್ ಚಾಂಡಿ ಉತ್ತಮ ಮುಖ್ಯಮಂತ್ರಿಯಾಗಿದ್ದರು ಎಂದು ಮಾಣಿ ಹೊಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News